ಎಳ್ಳಾರೆ ಗರ್ಧರಬೆಟ್ಟು ಜಿ. ಶೀನ ಆಚಾರ್ಯ ನಿಧನ.

ಮುನಿಯಾಲು : ಮುನಿಯಾಲು ಸಮೀಪದ ಎಳ್ಳಾರೆ ಗರ್ಧರಬೆಟ್ಟು ಶ್ರೀಧರ ನಿವಾಸದ ನಿವಾಸಿ ಜಿ.ಶೀನ ಆಚಾರ್ಯ (95) ಅವರು ಶನಿವಾರ ಸ್ವ ಗೃಹದಲ್ಲಿ ನಿಧನರಾದರು.
ಅಪಾರ ದೈವಭಕ್ತರಾಗಿ ಸಮಾಜದಲ್ಲಿ ಜನಾನುರಾಗಿಯಾಗಿದ್ದರು. ಕಾಷ್ಠಶಿಲ್ಪಿಯಾಗಿ ಶೀನ ಆಚಾರ್ಯರು ಹಲವು ದೇವಸ್ಥಾನಗಳ ಮರದ ಕೆಲಸ, ಕೆತ್ತನೆಯ ಕೆಲಸವನ್ನು ಮಾಡಿ ಖ್ಯಾತಿಗಳಿಸಿದ್ದರು. ಕುಕ್ಕುಜೆ ದೊಂಡೇರಂಗಡಿ ವಿಶ್ವಕರ್ಮ ಸಮಾಜ‌ ಸೇವಾ ಸಂಘದ ಸಕ್ರೀಯ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು, ಪತ್ನಿ, ಪುರೋಹಿತ್ ಜಿ.ಎಸ್.ಪುರಂದರ್ ಆಚಾರ್ಯ ಸಹಿತ ನಾಲ್ವರು ಪುತ್ರರು,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 
 
 
 
 
 
 
 
 

Leave a Reply