ಸಾಧಕರೆಡೆ ನಮ್ಮನಡೆ ತಿಂಗಳ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನವು ಹಮ್ಮಿಕೊಂಡ ಸಾಧಕರೆಡೆ ನಮ್ಮನಡೆ ತಿಂಗಳ ಕಾರ್ಯಕ್ರಮದಲ್ಲಿ 2022 ರ ಜುಲೈ ತಿಂಗಳ ಸಾಧಕರಾಗಿ ಶ್ರೀಯುತ ಕೆ. ಚಂದ್ರಶೇಖರ ಅಡಿಗ, ಕೌಂಜೂರು ಇವರನ್ನು ಅವರ ನಿವಾಸ ” ಶ್ರುತಿಸದ್ಮ ” ಕೌಂಜೂರು, ಗುಲ್ವಾಡಿ , ಕುಂದಾಪುರದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀಮತಿ ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು . ಉಮೇಶ ಬಾಯರಿ ಸ್ವಾಗತಿಸಿ ವಿದ್ವಾನ್ ಡಾ /ವಿಜಯ ಮಂಜರ್ ಪ್ರಸ್ತಾವನೆಗೈದರು. ಪ್ರತಿಷ್ಠಾನದ ಅಧ್ಯಕ್ಷ ಚಂದ್ರಶೇಖರ ಅಡಿಗರು ಧನ್ಯವಾದ ಸಮರ್ಪಿಸಿದರು. ರಾಮಚಂದ್ರ ಉಡುಪರು ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply