ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮ

ಶ್ರೀ ಶಾಂತಿಮತೀ ಪ್ರತಿಷ್ಠಾನದ ಸಾಧಕರೆಡೆ ನಮ್ಮ ನಡೆ ತಿಂಗಳ ಕಾರ್ಯಕ್ರಮಗಳು ದ ಅಂಗವಾಗಿ ಇಂದು ಸಂಜೆ ಸಾಲಿಗ್ರಾಮ ಪಾರಂಪಳ್ಳಿ ಯ ಶ್ರೀನಿವಾಸ ಪ್ರಸಾದ್ ಮಯ್ಯ ಅವರನ್ನು ಗೌರವಿಸಲಾಯಿತು, ಇದುವರೆಗೆ ಯಾವುದೇ ಫಲಾಪೇಕ್ಷೆ ಇಲ್ಲದೆ 59 ಬಾರಿ ರಕ್ತದಾನ ಮಾಡಿದ ಅವರ ಸಾಧನೆಯನ್ನು ಗುರುತಿಸಿ , ಅವರ ಮನೆಯಲ್ಲಿ ಇಂದು ಸಂಜೆ ನಡೆದ ಸರಳ ಸಮಾರಂಭದಲ್ಲಿ ಗೌರವಿಸಲಾಯಿತು, ಗೌರವ ಸ್ವೀಕರಿಸಿ ಮಾತನಾಡಿದ ಶ್ರೀಯುತರು ನನ್ನ ಆರೋಗ್ಯ ಸರಿಯಾಗಿ ಇರುವ ವರೆಗೆ ನಾನು ರಕ್ತದಾನ ಮಾಡುತ್ತೇನೆ‌ ಎಂದು ಹೇಳಿದರು,ಈ ಕಾರ್ಯಕ್ರಮದಲ್ಲಿ ಶಾಂತಿಮತೀ ಪ್ರತಿಷ್ಠಾನ ದ ಅಧ್ಯಕ್ಷರಾದ ಚಂದ್ರಶೇಖರ ಅಡಿಗಳು, ಹಾಗೂ ಉಡುಪಿ ಜಿಲ್ಲಾ ನಾಟಿ ವೈದ್ಯ ಸಂಘದ ಅಧ್ಯಕ್ಷ ಹರೀಶ ಸಾಮಗರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ವಿದ್ವಾನ್ ಡಾ. ವಿಜಯ ಮಂಜರ್ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷರಾದ ಚಂದ್ರಶೇಖರ ಅಡಿಗಳು ಧನ್ಯವಾದ ಸಮರ್ಪಣೆಗೈದು ರಾಮಚಂದ್ರ ಉಡುಪ ಬಾರ್ಕೂರು ಕಾರ್ಯಕ್ರಮ ನಿರೂಪಿಸಿದರು .ಲಘು ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಶಾಂತಿಮತೀ ಪ್ರತಿಷ್ಠಾನ ದ ಸದಸ್ಯರು, ಕೆನರಾ ಬ್ಯಾಂಕ್ ನ ನಿವೃತ್ತ ಮಹಾಪ್ರಬಂಧಕರಾದ ಮಂಜುನಾಥ ಭಟ್, ಹಾಗೂ ಶ್ರೀಯುತರ ಹಿತೈಷಿಗಳು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply