ಶ್ರೀ ಕೃಷ್ಣಧಾಮದ ಪುಟಾಣಿ ಮಕ್ಕಳ ಭಗವದ್ಗೀತಾ ಪಠಣ ತಂಡ ಶ್ರೀ ನೃಸಿಂಹಾಶ್ರಮ ಸ್ವಾಮೀಜಿಯ ಆಶಿರ್ವಾದ

ಉಡುಪಿ : ಬಾಳೇಕುದ್ರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀಶ್ರೀನೃಸಿಂಹಾಶ್ರಮ ಸ್ವಾಮೀಜಿಯವರ ಮಾರ್ಗದರ್ಶನದಂತೆ, ಶ್ರೀದೇವರ ಸಾನಿಧ್ಯದಲ್ಲಿ ವಿಶೇಷ ಪೂಜಾಕೈಂಕರ್ಯಗಳು ಜರುಗುತ್ತಿದ್ದು, ಕಾರ್ಯಕ್ರಮಕ್ಕೆ ಸ್ವ-ಇಚ್ಛೆಯಿಂದ ಆಗಮಿಸುವ “ಶ್ರೀಕೃಷ್ಣಧಾಮ” ಪುಟಾಣಿ ಮಕ್ಕಳ ಭಗವದ್ಗೀತಾ ಪಠಣ ತಂಡ ಉಡುಪಿ ತಂಡದ ಮಕ್ಕಳು ಯಾವುದೇ ಫಲಾಪೇಕ್ಷೆಯಿಲ್ಲದೇ ಭಕ್ತಿಪೂರ್ವಕವಾಗಿ ಸೇವೆ ಸಲ್ಲಿಸಿ ಶ್ರೀ ಶ್ರೀಗಳ ಪ್ರೀತಿಗೆ ಪಾತ್ರರಾಗಿರುತ್ತಾರೆ.

ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಸಲುವಾಗಿ ಇಂತಹ ಪಟಾಣಿಮಕ್ಕಳಿಗೆ ಮಾರ್ಗದರ್ಶನ, ಧೈರ್ಯ ತುಂಬುವ ಸದುದ್ಧೇಶದಿಂದ ಉಡುಪಿಯ ಕಿನ್ನಿಮುಲ್ಕಿಯ “ಶ್ರೀಕೃಷ್ಣಧಾಮ” ಎಂಬ ನಿವಾಸಕ್ಕೆ ಶ್ರೀಗಳು ಇತ್ತೀಚೆಗೆ ಪಾದಂಗೈದು ಈ ಮಕ್ಕಳಿಗೆ ಆಶೀರ್ವಚನ ನೀಡಿದರು.

 
 
 
 
 
 
 
 
 
 
 

Leave a Reply