ಸವಿತಾ ಸಮಾಜ ಹಾಲಾಡಿ ಆಶ್ರಯದಲ್ಲಿ ದಿ ಉದಯ ಭಂಡಾರಿ ಸ್ಮರಣಾರ್ಥ ‘ಫ್ರೆಂಡ್ಸ್ ಟ್ರೋಫಿ ಹಾಲಾಡಿ’

ಸವಿತಾ ಸಮಾಜ ಹಾಲಾಡಿ ಆಶ್ರಯದಲ್ಲಿ ದಿ ಉದಯ ಭಂಡಾರಿ ಸ್ಮರಣಾರ್ಥ ‘ಫ್ರೆಂಡ್ಸ್ ಟ್ರೋಫಿ ಹಾಲಾಡಿ ‘ನಡೆದ ಕ್ಷೌರಿಕ ವೃತ್ತಿ ನಿರತರ ಉಡುಪಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ ದಲ್ಲಿ ವಿನಯ್ ಇಲೆವೆನ್ ಕೋಟ ಪ್ರಥಮ ಸ್ಥಾನ ಪಡೆದು ಕೊಂಡಿತು, ಶ್ರೀ ಸಾಯಿ ಫ್ರೆಂಡ್ಸ್ ಹೆಬ್ರಿ ತಂಡ ರನ್ನರ್ ಆಫ್ ಪ್ರಶಸ್ತಿ ಪಡೆದು ಕೊಂಡಿತು, ಬೆಸ್ಟ್ ಬ್ಯಾಟ್ಸಮನ್ ಮತ್ತು ಪಂದ್ಯ ಪುರುಷೋತ್ತಮ ಕೋಟದ ಮೋಹನ್ ಭಂಡಾರಿ ಪಾಲಾಯಿತು, ಬೆಸ್ಟ್ ಬೌಲರ್ ಕೋಟದ ಕಾರ್ತಿಕ್ ಭಂಡಾರಿ ಪಡೆದರು, ಕೂಟದ ಸರಣಿ ಶ್ರೇಷ್ಠ ಪ್ರಶಸ್ತಿ ಹೆಬ್ರಿಯ ಸಂದೀಪ್ ಭಂಡಾರಿ ಪಡೆದರು.

ಪ್ರಶಸ್ತಿ ಪ್ರಧಾನ ಸಮಾರಂಭ ದಲ್ಲಿ ಗುರುದತ್ ಶೇಟ್ ಉದ್ಯಮಿ,ನವೀನ್ ಚಂದ್ರ ಭಂಡಾರಿ ಅಧ್ಯಕ್ಷರು, ಗೋವಿಂದ ಭಂಡಾರಿ ಉಪಾಧ್ಯಕ್ಷರು, ಸವಿತಾ ಸಮಾಜ ವಿವಿದೋದ್ದೇಶ ಸೌಹಾರ್ದ ಸಹಕಾರಿ, ಸದಾಶಿವ ಬಂಗೇರ ಕುರ್ಕಾಲು ಪ್ರ ಕಾರ್ಯದರ್ಶಿ,ಶೇಖರ್ ಸಾಲಿಯಾನ್ ಕೋಶಾಧಿಕಾರಿ ಉಡುಪಿ ಜಿಲ್ಲಾ ಸವಿತಾ ಸಮಾಜ, ಸುಭಾಸ್ ಭಂಡಾರಿ ಅಧ್ಯಕ್ಷರು ಕುಂದಾಪುರ ತಾಲೂಕು ಭಂಡಾರಿ ಸಮಾಜ, ಸುಧಾಕರ್ ಭಂಡಾರಿ ಅಧ್ಯಕ್ಷರು ಹಾಲಾಡಿ ವಲಯ ಸವಿತಾ ಸಮಾಜ ಮಂಜುನಾಥ್ ಭಂಡಾರಿ ಪಡುಕೆರೆ ಅಧ್ಯಕ್ಷರು ಕೋಟ ವಲಯ ಸವಿತಾ ಸಮಾಜ ಉಪಸ್ಥಿತರಿದ್ದರು, ನಾಗರಾಜ್ ಭಂಡಾರಿ ಕೋಶಾಧಿಕಾರಿ ಹಾಲಾಡಿ ವಲಯ ಸ್ವಾಗತಿಸಿದರು, ಪ್ರಸಾದ್ ಭಂಡಾರಿ ಅಧ್ಯಕ್ಷರು ಹಾಲಾಡಿ ಘಟಕ ಸವಿತಾ ಸಮಾಜ ವಂದಿಸಿದರು, ಸುಜಯ ಸುವರ್ಣ ಪ್ರ ಕಾರ್ಯದರ್ಶಿ ಕುಂದಾಪುರ ತಾಲೂಕ್ ಸವಿತಾ ಸಮಾಜ ಕಾರ್ಯಕ್ರಮ ನಿರೂಪಿಸಿದರು

 
 
 
 
 
 
 
 
 
 
 

Leave a Reply