ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಜಿಲ್ಲೆಯಲ್ಲಿ ಬಸವ ಜಯಂತಿ ಆಚರಣೆ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕೇಂದ್ರೀಯ ಕಚೇರಿಯಲ್ಲಿ ಬಸವ ಜಯಂತಿಯ ಪ್ರಯುಕ್ತವಾಗಿ ಜಗಜ್ಯೋತಿ ಬಸವೇಶ್ವರರ 889 ನೆ ಜಯಂತ್ಯೋತ್ಸವ ವನ್ನು ಆಚರಿಸಲಾಯಿತು. ಈ ಸಂದರ್ಬದಲ್ಲಿ ಕರಾವಳಿ ಪೊಲೀಸ್ ಪಡೆ ಗಂಗೊಳ್ಳಿ ಠಾಣೆಯ ಶ್ರೀ ಶಾಂತಗೌಡ ದೊರನಹಳ್ಳಿ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ಕರಾವಳಿ ಭಾಗದಲ್ಲಿ ಕ್ರಾಂತಿ ಜ್ಯೋತಿ ಬಸವಣ್ಣನವರ ಹೆಸರಿನಲ್ಲಿ ಬಸವ ಸಮಿತಿ ರಚನೆಯಾಗಿ ಐದು ವರ್ಷಗಳ ಕಾಲಾವಧಿಲ್ಲಿ ಬೆರಳೆಣಿಕೆಯ ಸದಸ್ಯರಷ್ಟೇ ಇರುವುದು ಬೇಸರದ ಸಂಗತಿ, ಇವತ್ತು ಸಂಗೊಳ್ಳಿ ರಾಯಣ್ಣನ ಈ ಸ್ಥಳದಲ್ಲಿ ನಾವೆಲ್ಲಾ ಸಂಕಲ್ಪ ಮಾಡೋಣ ಮುಂದಿನ ದಿನಗಳಲ್ಲಿ ಅತೀ ದೊಡ್ಡ ಪ್ರಮಾಣದಲ್ಲಿ ಬಸವ ಸಮಿತಿ ಬೆಳೆಸೋಣ ಬಸವ ತತ್ವವನ್ನು ಎಲ್ಲರಿಗೂ ತಿಳಿಸುವ ಕೆಲಸ ನಾವೆಲ್ಲಾ ಸೇರಿ ಮಾಡೋಣ ಎಂದು ಹಿತ ನುಡಿದರು.

ಈ ಸಂದರ್ಭದಲ್ಲಿ ಹಿರಿಯರಾದ ಉಪ್ಪೂರು ಜಂಗಮ ಮಠದ ಚಂದ್ರಶೇಖರಯ್ಯ,ಪಾಂಗಳ ಜಂಗಮ ಮಠದ ಗಿರೀಶ್ ಕುಮಾರ್, ಸೋಮನಾಥ್ PWD Engg. ಸಂಗನಗೌಡ ಯಾಳವಾರ, ಮಾನಪ್ಪ ಸಾಹುಕಾರ, ಶಿವಾನಂದ ತಳ್ಳಹಳ್ಳಿ,ರಾಯಣ್ಣ ಅಭಿಮಾನಿ ಬಳಗದ ಸಿದ್ದಣ್ಣ ಪೂಜಾರಿ,ಸಂತೋಷ ಮಾದರ್ ಉಪಸ್ಥಿತರಿದ್ದರು, ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಸ್ವಾಗತಿಸಿದರು, ಉಪಾಧ್ಯಕ್ಷರಾದ ಲಕ್ಷ್ಮಣ್ ಕೋಲ್ಕಾರ್ ವಂದನೆಗೈದರು .

 
 
 
 
 
 
 
 
 
 
 

Leave a Reply