ಮಣಿಪಾಲ: – ಸಂಗಮ ಕಲಾವಿದರು ಇವರ ಆಶ್ರಯದಲ್ಲಿ 10 ದಿನಗಳ ಕಾಲ ನಡೆಯುವ ಉಚಿತ ರಂಗ ತರಬೇತಿ ಶಿಬಿರ ದ ಉದ್ಘಾಟನೆ ಇತ್ತೀಚೆಗೆ ನಡೆಯಿತು.
ಖ್ಯಾತ ರಂಗ ಕಲಾವಿದರು ಹಾಗೂ ಸಾಹಿತಿ ಸಂವತ೯ ಸಾಹಿಲ್ ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷ ಡಾII ವಿರೂಪಾಕ್ಷ ದೇವರಮನೆ, ವಿವೇಕಾನಂದ , ಸಂಸ್ಥೆಯ ಗೌರವಾಧ್ಯಕ್ಷ ಸುಧೇಶ್ ಕೆ, ಅಧ್ಯಕ್ಷ ಶ್ರೀಪತಿ ಪೆರಂಪಳ್ಳಿ, ಮುಂತಾದವರು ಉಪಸ್ಥಿತರಿದ್ದರು. ಸಂತೋಷ ಶೆಟ್ಟಿ ಹಿರಿಯಡಕ ವಂದಿಸಿದರು.