ಲೋಕಕಲ್ಯಾಣಾರ್ಥವಾಗಿ ಶ್ರೀ ನರಸಿಂಹ ಹೋಮ ಸಂಪನ್ನ

ಬ್ರಾಹ್ಮಣ ಮಹಾಸಭಾ, ಸಾಲಿಗ್ರಾಮ ವಲಯ, ಇವರ ಸಂಯೋಜನೆಯಲ್ಲಿ ದಿ 17/12/22 ರಂದು ಶ್ರೀ ಗುರುನರಸಿಂಹನ ಸಾನಿಧ್ಯದಲ್ಲಿ , ಲೋಕಕಲ್ಯಾಣಾರ್ಥವಾಗಿಶ್ರೀ ನರಸಿಂಹ ಹೋಮ,“ ಸಾಮೂಹಿಕ ವಿಷ್ಣು ಸಹಸ್ರ ನಾಮದ ಪಠಣ, ಹಾಗೂ ಶ್ರೀ ನರಸಿಂಹ ಸ್ತೋ ತ್ರ ,ಸಮಾಜ ಬಾಂಧವರಿಂದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಇದೇ ವೇದಿಕೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತರಾದ ಶ್ರೀಮತಿ ಜಾನಕಿ ಹಂದೆ ಯವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಸಮಾಜದ ಪ್ರಥಮ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಸಭೆಯಲ್ಲಿ ವಿತರಿಸಲಾಯಿತು.
ವೇದಿಕೆಯಲ್ಲಿ ದೇವಸ್ಥಾನದ ಅಧ್ಯಕ್ಷ ಶ್ರೀ ಕೆ. ಎಸ್. ಕಾರಂತ್ ,ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಶ್ರೀ ಶಿವರಾಮ ಉಡುಪ, ಕಾರ್ಯದರ್ಶಿ ಶ್ರೀ ಕೆ ರಾಜಾರಾಮ ಐತಾಳ,ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಾರ್ಯಕಾರಿಮಂಡಳಿಯ ಶ್ರೀ ಕೆ. ತಾರಾನಾಥ ಹೆೊಳ್ಳ, ಕೂ ಮ ಜ , ಸಾಲಿಗ್ರಾಮ ಅಂಗ ಸಂಸ್ಥೆ ಅಧ್ಯಕ್ಷ ಶ್ರೀ ಶ್ರೀಪತಿ ಅಧಿಕಾರಿ, ಪಟ್ಟಾಭಿ ರಾಮಚಂದ್ರ ಸೋಮಯಾಜಿ, ಸುಬ್ರಾಯ ಉರಾಳ, ಶ್ರೀಸೂರ್ಯನಾರಾಯಣ ಅಲ್ಸೆ ಉಪಸ್ಥಿತರಿದ್ದರು.ಶಾಂತಿ ಮಂತ್ರದೋಂದಿಗೆ ಸಭೆ ಸಮಾಪನ ಗೋಂಡಿತು.

 
 
 
 
 
 
 
 
 

Leave a Reply