ಹಿಂದೂ ಮಹಿಳೆಯರು 4 ಮಕ್ಕಳಿಗೆ ಜನ್ಮ ನೀಡಿ, ಇಬ್ಬರನ್ನು ಆರ್‌ಎಸ್‌ಎಸ್‌ಗೆ ನೀಡಿ ~ಸಾಧ್ವಿ ರಿತಂಬರ

ಎಲ್ಲಾ ಹಿಂದೂ ಮಹಿಳೆಯರು ನಾಲ್ಕು ಮಕ್ಕಳಿಗೆ ಜನ್ಮ ನೀಡಿ, ಅವರಲ್ಲಿ ಇಬ್ಬರನ್ನು ಆರ್ ಎಸ್ ಎಸ್ ಗೆ ಒಪ್ಪಿಸಬೇಕು ಎಂದು ಹಿಂದುತ್ವ ನಾಯಕಿ ಸಾಧ್ವಿ ರಿತಂಬರ ಆಗ್ರಹಿಸಿದ್ದಾರೆ.

ನಿರಾಲಾ ನಗರದಲ್ಲಿ ನಡೆದ ರಾಮ ಮಹೋತ್ಸವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ಭಾರತ ಶೀಘ್ರದಲ್ಲೇ ಹಿಂದೂ ರಾಷ್ಟ್ರವಾಗಲಿದೆ ಎಂದ ಅವರು, ಏಕೀಕೃತ ನಾಗರಿಕ ಸಂಹಿತೆ ದೇಶದಲ್ಲಿ ಆದಷ್ಟು ಬೇಗ ಜಾರಿಯಾಗಬೇಕು. ಇದು ಜನಸಂಖ್ಯೆಯ ಅಸಮತೋಲನವನ್ನು ಪರಿಹರಿಸುತ್ತದೆ ಮತ್ತು ದೇಶದಲ್ಲಿ ಜನಸಂಖ್ಯೆಯ ಅಸಮತೋಲನ ಇದ್ದರೆ, ಯಾವುದೇ ಪ್ರಗತಿಯಾಗುವುದಿಲ್ಲ ಎಂದು ಹೇಳಿದರು.

ರಾಮಮಂದಿರ ಆಂದೋಲನದಲ್ಲಿ ಭಾಗವಹಿಸಿದ್ದ ಋತಂಬರ ಅವರು ವಿಶ್ವ ಹಿಂದೂ ಪರಿಷತ್ತಿನ ಮಹಿಳಾ ಘಟಕವಾದ ದುರ್ಗಾ ವಾಹಿನಿಯ ಸಂಸ್ಥಾಪಕ ನಾಯಕಿ.

 
 
 
 
 
 
 
 
 
 
 

Leave a Reply