ಉಡುಪಿ :- ರೋಟರಿ ಕ್ಲಬ್ ಮಣಿಪಾಲ ಮತ್ತು ರೋಟರಿ ಕ್ಲಬ್ ಉಡುಪಿ ಇದರ ಜಂಟಿ ಸಭೆಯು ನ 23 ರಂದು ರೋಟರಿ ಸ್ಪೊಟ್ಸ್ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಡಾ| ಟಿ.ಎಂ.ಎ ಪೈ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್ ಭಾಗವಹಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನಿಯೋಜಿತ ಜಿಲ್ಲಾ ಗವನ೯ರ್ ಡಾ| ಹೆಚ್.ಗೌರಿ, ವಲಯ ಸಹಾಯಕ ಗವನ೯ರ್ ಡಾ| ಸುರೇಶ್ ಶೆಣ್ಯ್, ಡಾ| ಗಿರಿಜಾ, ಮಣಿಪಾಲ ರೋಟರಿ ಅಧ್ಯಕ್ಷ ಡಾ| ವಿರೂಪಾಕ್ಷ ದೇವರಮನೆ, ರೋಟರಿ ಉಡುಪಿ ಅಧ್ಯಕ್ಷ ಹೇಮಂತ್ ಕಾಂತ್, ರಾಜವಮ೯ ಅರಿಗ, ಕಾಯ೯ದಶಿ೯ಗಳಾದ ರೆಹಮಾನ್, ಗೋಪಾಲಕೃಷ್ಣ ಪ್ರಭು ಮುಂತಾದವರಿದ್ದರು.
ಈ ಸಂದಭ೯ದಲ್ಲಿ ರೋಟರಿ ಕ್ಲಬ್ ಮಣಿಪಾಲದ ವತಿಯಿಂದ ಆಥಿ೯ಕವಾಗಿ ಹಿಂದುಳಿದ ಈಗಾಗಲೇ ಟೈಲರಿಂಗ್ ತರಬೇತಿ ಪಡೆದ ಪ್ರಶಾಂತಿ ಉಪಾಧ್ಯಾಯ, ಶ್ರೀಲತ ಆಚಾಯ೯, ಆಶಾ ನಿಲಯದ 7 ಆಶ್ರಮವಾಸಿಗಳಿಗೆ 4 ಟೈಲರಿಂಗ್ ಯಂತ್ರಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದರಿಂದ ಅವರೆಲ್ಲರೂ ಸ್ವ ಉದ್ಯೋಗ ನಡೆಸಲು ಅನುಕೂಲವಾಗಿದೆ.