ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮ

ಉಡುಪಿ, ಡಿಸೆಂಬರ್ 22 (ಕವಾ): ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕ, ಕರ್ನಾಟಕ ಶಾಖೆ ಹಾಗೂ ಓಡಿಸ್ಸಾ ರಾಜ್ಯದ ಜಹಾಜ್‌ಪುರ ಜಿಲ್ಲೆಯ ಮಹಾಪುರುಷ ಹಾಡಿದಾಸ್ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ಯುವ ರೆಡ್‌ಕ್ರಾಸ್ ಕಾರ್ಯ
ಚಟುವಟಿಕೆಗಳ ಅಡಿಯಲ್ಲಿ ಅಂತರ್ ರಾಜ್ಯ ಯುವ ವಿನಿಮಯ ಕಾರ್ಯಕ್ರಮವು ಇಂದು ಅಜ್ಜರಕಾಡು ರೆಡ್‌ಕ್ರಾಸ್ ಭವನದ ಹೆನ್ರಿ ಡ್ಯುನಾಂಟ್ ಹಾಲ್‌ನಲ್ಲಿ ನಡೆಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ, ಜಿಲ್ಲಾ ಘಟಕದ ಇತಿಹಾಸ, ರೆಡ್‌ಕ್ರಾಸ್ ಕಾರ್ಯ ಚಟುವಟಿಕೆಗಳಾದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ, ಪ್ರಥಮ ಚಿಕಿತ್ಸಾ ತರಬೇತಿ, ವಿಪತ್ತು ನಿರ್ವಹಣೆ,
ನೆರೆ ಪರಿಹಾರ ಸಾಮಾಗ್ರಿಗಳ ವಿತರಣೆ, ಕೋವಿಡ್ ಸಮಯದಲ್ಲಿ ಮಾಸ್ಕ್, ಸ್ಯಾನಿಟೈಸರ್ ಮತ್ತು ಗ್ಲೌವ್ಸ್ ವಿತರಣೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಸಿಗುವ ಕೃತಕ ಅವಯವ ಸಾಧನಗಳು, ಆಡಿಯೋಲಜಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್,
ಫಿಸಿಯೋಥೆರಪಿಸ್ಟ್ ಪಿ & ಓ ಇಂಜಿನಿಯರ್‌ರವರ ಸೇವಾ ಸೌಲಭ್ಯ ಬಗ್ಗೆ ಹಾಗೂ ಮುಂದಿನ ರೆಡ್ ಕ್ರಾಸ್ ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಓಡಿಸ್ಸಾ ಮಹಾಪುರುಷ ಹಾಡಿದಾಸ್ ಮಹಾವಿದ್ಯಾಲಯದ ಯುವ ರೆಡ್‌ಕ್ರಾಸ್ ಕೌನ್ಸಿಲರ್‌ಗಳಾದ ಡಾ. ನಿರಂಜನ್ ಪಾತ್ರಾ, ಡಾ. ಆದಿತ್ಯ ಮಿಶ್ರಾ ಹಾಗೂ ಪ್ರೋ. ಅಮಿತ್ ಬಾಲಾ ಮೋಹಾಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಜಹಾಜ್‌ಪುರ ಜಿಲ್ಲೆಯ ಯುವ
ರೆಡ್‌ಕ್ರಾಸ್ ಚಟುವಟಿಕೆಗಳಾದ ರಕ್ತದಾನ ಶಿಬಿರ, ಪ್ರಥಮ ಚಿಕಿತ್ಸಾ ತರಬೇತಿ, ವಿಪತ್ತು ನಿರ್ವಹಣಾ ತರಬೇತಿ, ರಸ್ತೆ ಸುರಕ್ಷತಾ ಕಾರ್ಯಕ್ರಮ, ಏಡ್ಸ್ ಜಾಗೃತಿ ಜಾಥಾ ಹಾಗೂ ಏಡ್ಸ್ ಅರಿವು ಕಾರ್ಯಕ್ರಮ, ರೋಗಿಗಳಿಗೆ ಔಷಧಿ ಖರೀದಿಸಲು ಆರ್ಥಿಕ ಧನಸಹಾಯ
ನೀಡುವುದು, ಪರಿಸರ ದಿನಾಚರಣೆ, ಹೆಲ್ಮೆಟ್ ಬಳಸುವ ಬಗ್ಗೆ ಮಾಹಿತಿ ನೀಡಿ, ಜನ್ಮ ದಿನಾಚರಣೆಯಂದು ರಕ್ತದಾನ ಮಾಡುವ ಮೂಲಕ ರಕ್ತದಾನ ಉತ್ಸವವನ್ನು ಕಾಲೇಜಿನ ಯುವ ರೆಡ್‌ಕ್ರಾಸ್, ಎನ್.ಸಿ.ಸಿ., ಪೋಲಿಸ್ ಇಲಾಖೆ ಹಾಗೂ ಇನ್ನಿತರ ಸಂಘ ಸಂಸ್ಥೆ,
ಇಲಾಖೆಗಳೊಂದಿಗೆ ಮಾಡಲಾಗುವುದು ಎಂದ ಅವರು, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ಸ್ವಂತ ಸುಸಜ್ಜಿತವಾದ ಭವ್ಯ ಕಟ್ಟಡವನ್ನು ಹೊಂದಿದ್ದು, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದೊoದಿಗೆ ವಿಕಲಚೇತನರ ಶ್ರೇಯಸ್ಸಿಗೆ ಮಾಡುತ್ತಿರುವ ಸಮಾಜಮುಖಿ ಸೇವಾ ಕಾರ್ಯಚಟುವಟಿಕೆಯನ್ನು ಶ್ಲಾಘಿಸಿದರು.

ರೆಡ್‌ಕ್ರಾಸ್ ಸದಸ್ಯರಾದ ಬಾಲಕೃಷ್ಣ ಶೆಟ್ಟಿ ಕೆ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಕ್ಲಿನಿಕಲ್ ಸೈಕಾಲಜಿಸ್ಟ್ ವೈಶಾಖ್ ವಾರಂಬಳ್ಳಿ, ರೆಡ್‌ಕ್ರಾಸ್ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರೆಡ್‌ಕ್ರಾಸ್‌ನ ಸದಸ್ಯ ಟಿ. ಚಂದ್ರಶೇಖರ್ ಸ್ವಾಗತಿಸಿ, ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ ವಂದಿಸಿದರು.

 
 
 
 
 
 
 
 
 
 
 

Leave a Reply