ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರವು ಉಡುಪಿ ಜಿಲ್ಲೆಯಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದಲ್ಲಿ ಬಹಳ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಜಿಲ್ಲೆಯ ವಿಕಲಚೇತನರಿಗೆ ಸೂಕ್ತ ನ್ಯಾಯ ಒದಗಿಸಿಕೊಡಲು ಶ್ರಮ ವಹಿಸುತ್ತಿದೆ.
ಕೇಂದ್ರದಲ್ಲಿ ೧೦ ಜನ ತಜ್ಙರ ತಂಡವಿದ್ದು ಫಿಸಿಯೋಥೆರಪಿ, ಮಾತಿನ ತರಬೇತಿ, ದೈನಂದಿನ ಚಟುವಟಿಕೆಗಳ ತರಬೇತಿ ಮುಂತಾದ ಹಲವಾರು ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ವಿವಿಧ ರೀತಿಯ ಸಾಧನ ಸಲಕರಣೆಗಳನ್ನು ಬೇರೆ ಬೇರೆ ಮೂಲಗಳಿಂದ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು ಕೃತಕ ಕಾಲು ಕೈ ಕ್ಯಾಲಿಪರ್ ಮುಂತಾದ ಕೃತಕ ಆವಯವಗಳನ್ನು ಕೇಂದ್ರದಲ್ಲೇ ತಯಾರಿಸಿ ವಿತರಿಸಲಾಗುತ್ತಿದೆ.
ಶನಿವಾರದಂದು ಕೆಂದ್ರದಲ್ಲಿ ತಯಾರಿಸಿದ ಕೃತಕ ಕಾಲನ್ನು ಫಲಾನುಭವಿಗೆ ಅಭ್ಯಾಸ ಮಾಡಲು ವಿತರಿಸಲಾಯಿತು. ಈ ಸಂದರ್ಭ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಸಭಾಪತಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಗೌರವ ಕಾರ್ಯದಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಖಜಾಂಚಿ ಡಾ. ಅರವಿಂದ ನಾಯಕ್ ಅಮ್ಮುಂಜೆ, ಕೇಂದ್ರದ ನೋಡಲ್ ಅಧಿಕಾರಿ ಪಿ.ವಿ ಸುಬ್ರಮಣಿ, ಇಂಜಿನಿಯರ್ ವಿಕ್ಕಿ ಕುಮಾರ್, ರೆಡ್ ಕ್ರಾಸ್ ಹಾಗೂ ಡಿ.ಡಿ.ಆರ್.ಸಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.