ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆಯ ನೇಕಾರರ ಪ್ರಕೋಷ್ಠದ ಸಂಚಾಲಕ ರತ್ನಾಕರ್ ಇಂದ್ರಾಳಿ ಯವರನ್ನು ರಾಜ್ಯ ನೇಕಾರರ ಪ್ರಕೋಷ್ಠದ ಸದಸ್ಯರಾಗಿ ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ರವರ ಶಿಫಾರಸಿನ ಮೇರೆಗೆ ರಾಜ್ಯ ನೇಕಾರರ ಪ್ರಕೋಷ್ಠದ ಸಂಚಾಲಕ ಡಾ. ಬಸವರಾಜ್ ಎಸ್ ಕೇಲಗಾರ ಹಾಗು ಸಹ ಸಂಚಾಲಕ ಡಾ. ಕೆ. ನಾರಾಯಣ್ ರವರುಗಳು ನೇಮಕ ಮಾಡಿರುತ್ತಾರೆ.
ರತ್ನಾಕರ್ ಇಂದ್ರಾಳಿಯವರು ಮಂಗಳೂರು ವಿಭಾಗದ ಕೊಡಗು, ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.