ಶ್ರೀ ರಾಮ ವಿಠಲ ದೇವರಿಗೆ ಲಕ್ಷೋಪಲಕ್ಷ ತುಲಸೀ ಅರ್ಚನೆ

ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ಬುಧವಾರ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಶಿಲಾನ್ಯಾಸ ನೆರವೇರಿಸುವ ಸಂದ ರ್ಭದಲ್ಲಿ ಕಾರ್ಯಕ್ರಮದ ನಿರ್ವಿಘ್ನತಾ ಸಿದ್ಧಿ , ಶಿಲಾನ್ಯಾಸ ಮುಹೂರ್ತದಲ್ಲಿನ ಎಲ್ಲ ದೋಷ ನಿವಾರಣೆಯಾಗಿ ಶುಭ ಅಮೃತ ಘಳಿಗೆಯ ಪ್ರಾಪ್ತಿ , ಅತೀ ಶೀಘ್ರ ಸುಸೂತ್ರವಾಗಿ ಭವ್ಯ ಮಂದಿರ ನಿರ್ಮಾಣವಾಗಿ ಸಮಸ್ತ ಲೋಕಕ್ಕೆ

ಶ್ರೀ ಸೀತಾರಾಮದೇವರ ಪೂರ್ಣ ಕೃಪೆ ಪ್ರಾಪದತಿಯಾಗುವಂತೆ ಪ್ರಾರ್ಥಿಸಿ , ರಾಮ ಮಂದಿರ ನತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಾತುರ್ಮಾಸ್ಯ ನಿಮಿತ್ತ ಅಯೋಧ್ಯೆಗೆ ತೆರಳದೇ ಉಡುಪಿ ಸಮೀಪದ ನೀಲಾವರ ಗೋಶಾಲೆ ಯ ಆವರಣದ ಶಾಖಾ ಮಠದಲ್ಲಿ ನವಗ್ರಹ ಯಾಗ , ಬಳಿತ್ಥಾ ಸೂಕ್ತ ಹೋಮ , ರಾಮತಾರಕ ಮಂತ್ರ ಯಾಗವನ್ನು ವೈದಿಕರ ಮೂಲಕ ನೆರವೇರಿಸಿದರು.

ಮಠದ ಆರಾಧ್ಯಮೂರ್ತಿ ಶ್ರೀ ರಾಮ ವಿಠಲ ದೇವರಿಗೆ ಲಕ್ಷೋಪಲಕ್ಷ ತುಲಸೀ ಅರ್ಚನೆಯನ್ನು ವಿಪ್ರರ ವಿಷ್ಣು ಸಹಸ್ರನಾಮಾವಳಿ ಪಠನ ಸಹಿತ ನೆರವೇರಿಸಿದರು . ಬಳಿಕ ಮಂಗಳಾರತಿ ಬೆಳಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು . ಈ ಸಂದರ್ಭ ಪಟ್ಟದ ದೇವರ ಂಮಟಪದ ಕೆಳಭಾಗದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಭಾವಚಿತ್ರವನ್ನಿಟ್ಟು ತುಲಸೀ ಅರ್ಪಿಸಿ ಗುರುಗಳಿಗೂ ಮಂಗ ಳಾರತಿ ಬೆಳಗಿ ಗೌರವ ಅರ್ಪಿಸಿದರು . ಗೋವುಗಳಿಗೆ ಗೋಗ್ರಾಸ ಸಮರ್ಪಣೆಯನ್ನೂ ಮಾಡಿದರು . ಪಟಾಕಿ ಸಿಡಿಸಿ ಸಂಭ್ರಮಾ ಚರಣೆ ನಡೆಯಿತು .ಬಳಿಕ ಅಯೋಧ್ಯೆಯ ಕಾರ್ಯಕ್ರಮವನ್ನು ಶ್ರೀಗಳು ದೂರದರ್ಶನ ನೇರ ಪ್ರಸಾರದ ಮೂಲಕ ವೀಕ್ಷಿಸಿ ಸಂತೋಷಪಟ್ಟರು. ಭಕ್ತಾದಿಗಳಿಗೆ ಅನ್ನರಾಧನೆ ನಡೆಯಿತು.

 
 
 
 
 
 
 
 
 
 
 

Leave a Reply