ಪುನೀತ್ ರಾಜ್ ಗೌರವ ಪುರಸ್ಕಾರ

ಉಡುಪಿ :- ಆತ್ಮಶ್ರೀ ಕನ್ನಡ ಸಾಂಸ್ಕೃತಿಕ ಪ್ರತಿಷ್ಟಾನ ಬೆಂಗಳೂರು ಇದರ ವತಿಯಿಂದ ಮೇ.15ರಂದು ನಡೆದ ಪುನೀತ್ ರಾಜ್ ಕುಮಾರ್ ಸಂಸ್ಮರಣೆ ಮತ್ತು ವಿಚಾರ ಸಂಕಿರಣ ಕಾಯ೯ಕ್ರಮ ಮೇ 15 ರಂದು ಸಿದ್ದಾಪುರದಲ್ಲಿ ನಡೆಯಿತು.
ಈ ಸಂದಭ೯ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತರಬೇತುದಾರ ರಾಘವೇಂದ್ರ ಪ್ರಭು, ಕವಾ೯ಲು ರವರನ್ನು ಪುನೀತ್ ರಾಜ್ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಈ ಸಂದಭ೯ದಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಶೇಖರ್, ಗ್ರಂಥಾಲಯ ಇಲಾಖೆಯ ನಿದೇ೯ಶಕ ಸತೀಶ್ ಕುಮಾರ್ ಹೊಸಮನಿ, ಸಪ೯ಭೂಷಣ ಶ್ರೀಗಳು, ನಟಿ ಭಾರತಿ ಹೆಗಡೆ, ಗುಣವಂತ ಮಂಜು ಮುಂತಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply