ವಿಷನ್ ಡೊಕ್ಯುಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆ ಉಡುಪಿ: ಜಿಲ್ಲಾಧಿಕಾರಿ ಜಿ ಜಗದೀಶ್

ಉಡುಪಿ ​: ಉಡುಪಿ ಜಿಲ್ಲೆ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿದಂತಹ ಜಿಲ್ಲೆ​.   ಮೊದಲಿನಿಂದಲೂ ಸಹ ಎಲ್ಲಾ ಧಾರ್ಮಿಕ-​ ಸಾಂಸ್ಕೃತಿಕ  ಕ್ಷೇತ್ರಗಳಲ್ಲೂ ಅತ್ಯುತ್ತಮ ವಾತಾವರಣ ಹೊಂದಿ​, ಪ್ರವಾಸಿಗರನ್ನು ಹೆಚ್ಚು ಮನಸೆಳೆಯುವ ಜಿಲ್ಲೆಯಾಗಿದೆ ಎಂದು ಜಿಲ್ಲಾಧಿಕಾರಿ ಜಿ ಜಗದೀಶ್ ಹೇಳಿದರು.​ ಅವರು ಇಂದು ಜಿಲ್ಲಾಡಳಿತ , ಪ್ರವಾಸೋದ್ಯಮ ಇಲಾಖೆ ಉಡುಪಿ, ಮಲ್ಪೆ ಅಭಿವೃದ್ಧಿ ಸಮಿತಿ, ನೆಹರು ಯುವ ಕೇಂದ್ರ​ , ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ, ಜಿಲ್ಲೆ ಹಾಗೂ ಸೌಟ್ಕ್​ ​&​​ ಗೈಡ್ಸ್ ಇವರ ಸಹಯೋಗದಲ್ಲಿ ನಡೆದ​ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಹಾಗೂ ಗ್ರಾಮೀಣಾಭಿವೃದ್ಧಿ ಘೋಷಣೆಯೊಂದಿಗೆ ಆಯೋಜಿಸಿದ​ ​ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಷನ್ ಡೊಕ್ಯುಮೆಂಟ್ ಮಾಡುತ್ತಿರುವ ಏಕೈಕ ಜಿಲ್ಲೆ ಉಡುಪಿ ಎಂದು​ ಹೇಳಲು ಹೆಮ್ಮೆಯಾಗಿದೆ, ವಿಷನ್ ಡೊಕ್ಯಮೆಂಟ್ ಅಂತಿಮ ಹಂತದಲ್ಲಿದೆ. ಅದು ಪೂರ್ಣಗೊಂಡ ನಂತರ ಸರಕಾರಕ್ಕೆ​ ಸಲ್ಲಿಸಿ ಉಡುಪಿ ಜಿಲ್ಲೆಯನ್ನು ಪ್ರವಾಸೋದ್ಯಮಕ್ಕೆ ಆದ್ಯತೆ ಜಿಲ್ಲೆಯಾಗಿ ಪರಿಗಣಿಸಲಾಗುವುದು ಈ ಮೂಲಕ ರಾಜ್ಯ​ ಹಾಗೂ ಕೇಂದ್ರ ಸರಕಾರದಿಂದ ಹೆಚ್ಚಿನ ಅನುದಾನವನ್ನು ಪಡೆದುಕೊಂಡು ಜಿಲ್ಲೆಯ ಪ್ರವಾಸೋದ್ಯಮವನ್ನು ಇನ್ನೂ​ ಉತ್ತುಂಗಕ್ಕೇರಿಸ​ ಬೇಕೆಂದು ಎಂಬುದು ಎಲ್ಲಾ ಅಧಿಕಾರಿ, ಹಾಗೂ ರಾಜಕಾರಣಿಗಳ ಆಶಯವಾಗಿದೆ ಎಂದು ತಿಳಿಸಿದರು.
ಉಡುಪಿ ಜಿಲ್ಲೆಗೆ ಪ್ರವಾಸಕ್ಕೆ ಬರುವವರು ಬೇರೆಯವರಿಗೆ ತೊಂದರೆಯಗದ ರೀತಿಯಲ್ಲಿ ಪ್ರವಾಸವನ್ನು ಮಾಡಿ​ ಹೋಗಬೇಕೆಂದು ಮನವಿ ಮಾಡಿಕೊಂಡರು.​ ಬ್ಲೂ ಪ್ಲಾಗ್ ಬೀಚ್ ಇನ್ನೆನ್ನೂ ಅಂತ ರಾಷ್ಟ್ರೀಯ ಮನ್ನಣೆಯನ್ನು ಪಡೆಯುದಷ್ಟೇ ಬಾಕಿ, ​ರಾಷ್ಟ್ರೀಯ ಎಲ್ಲಾ​ ಜ್ಯೂರಿಗಳು ಅತ್ಯುತ್ತಮವಾಗಿ ಬೆಳವಣಿಗೆಯಾಗಿರುವ ಬೀಚ್ ಎಂದರೆ ಪಡುಬಿದ್ರಿಯ ಎಂಡ್ ಪಾಯಿಂಟ್ ಬೀಚ್ ಬ್ಲೂ​ ಪ್ಲಾಗ್ ಬೀಚ್ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ ಎಂದರು.​ ಪ್ರವಾಸೋದ್ಯಮಕ್ಕೆ ಉಡುಪಿ ಜಿಲ್ಲೆಯಲ್ಲಿ ಹೊಸ ಆಯಾಮವನ್ನು ಕೊಡಬೇಕು , ಹೊಸತನವನ್ನು ನೀಡಬೇಕು, ಎಲ್ಲಾ​ ರಾಜ್ಯದ-​ರಾಷ್ಟ್ರದ ಜನರು ಉಡುಪಿಯತ್ತ ಪ್ರವಾಸೋದ್ಯಮಕ್ಕೆ ಬರುವಂತಾಗಬೇ​ಕೆಂದು ತಿಳಿಸಿದರು.​ 
ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ ಧನಾತ್ಮಕವಾಗಿ​ ಚಿಂತನೆಗಳನ್ನು ಮಾಡಿದಾಗ ಖಂಡಿತವಾಗಿಯೂ ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.​ ಸಂಪನ್ಮೂಲ ವ್ಯಕ್ತಿ ಪ್ರೊ.ಈಶ್ವರ್ ಮಾತಾಡಿ ಪ್ರವಾಸೋದ್ಯಮ ಮತ್ತು ಗ್ರಾಮೀಣಾಭಿವೃದ್ಧಿಯಲ್ಲಿ ಪ್ರವಾಸಿಗಳಿಗೆ​ ಬೇಡಿಕೆ ಮತ್ತು ಪೂರೈಕೆಗೆ ಯಾವುದು ಬೇಕಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ ಎಂದರು.​ ಪ್ರವಾಸಿಗರು ಅಲ್ಲಿಯ ಭಾಷೆ-​ಸಂಸ್ಕೃತಿ ಶೈಲಿ, ಅವರು ತಿನ್ನುವ ಸ್ಥಳೀಯ ತಿನಿಸುಗಳನ್ನು ಬಯಸುತ್ತಾರೆ,​ ಆಕರ್ಷಣೆಗಳಿಗೆ ಜನ ಬಂದು ಹೋಗುತ್ತಾರೆ, ಹಾಗೂ ಊಟದ ವ್ಯವಸ್ಥೆ ಮನೆಗಳಲ್ಲಿ ಆಗುವ ರೀತಿ ಬದಲಾವಣೆಯನ್ನುಮಾಡಬೇಕೆಂದು ತಿಳಿಸಿದರು.​ 
ಅಧ್ಯಕ್ಷತೆಯನ್ನು ವಹಿಸಿದ ನಗರಾಭಿವೃದ್ಧಿ ಅಧ್ಯಕ್ಷ ರಾಘವೇಂದ್ರ ಕಿಣಿ​ ​ಪ್ರಾಸ್ತವಿಕ ಮಾತಾಡಿದರು.  ​ಕಾರ‍್ಯಕ್ರಮದಲ್ಲಿ ಕೊರೋನಾ ಸಂದರ್ಭದಲ್ಲಿ ಮಾಸ್ಕ್ಗಳನ್ನು ತಯಾರಿಸಿ ಸರಕಾರಕ್ಕೆ ನೀಡಿದ ಇಶಿತಾಆಚಾರ್‌ರವರನ್ನು ಸನ್ಮಾನಿಸಲಾಯಿತು.
ಗಣ್ಯರು ಬೀಚ್‌ನ ಸುತ್ತ-ಮುತ್ತ ಎಲ್ಲಾ ಸ್ವಚ್ಛತಾ​   ​ಕಾ ರ‍್ಯದಲ್ಲಿ ಭಾಗಿಯಾದರು.​ಕಾ ರ‍್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋತ್,​ ತಾಲೂಕು ಪಂಚಾಯತ್ ಅಧ್ಯಕ್ಷೆ ಸಂಧ್ಯಾ ಕಾಮತ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕರಾವಳಿ ಪ್ರವಾಸೋದ್ಯಮ​ ಸಂಘಟನೆಯ ಅಧ್ಯಕ್ಷ ಮನೋಹರ ಶೆಟ್ಟಿ, ​ಜಿಲ್ಲಾ  ಸೌಟ್ಕ್​ ​ ​ಆಯುಕ್ತ  ​ಡಾ. ವಿಜಯೇಂದ್ರ, ಕೌನ್ಸಿಲ​ರ್  ​ಶ್ರೀಶ ಕೊಡವೂರು, ಸುಂದರ್ ​ಕಲ್ಮಾಡಿ, ಆ್ಯಡ್ಲಿನ್​ ಉಪಸ್ಥಿತರಿದ್ದರು.​ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯ್ಕ್, ಸ್ವಾಗತಿಸಿಮಲ್ಪೆ ಅಭಿವೃದ್ಧಿ ಸಮಿತಿ​ ಹಾಗೂ ಪೌರಾಯುಕ್ತ  ಆನಂದ್.ಚಿ ಕಲ್ಲೋಳಿಕರ್ ​ನಿರೂಪಿಸಿದರು 
 
 
 
 
 
 
 
 
 
 
 

Leave a Reply