ಅಕ್ಷಯ ತೃತೀಯದಂದು ಹಿಂದೂಗಳ ಚಿನ್ನದಂಗಡಿಯಲ್ಲೆ ಚಿನ್ನ ಖರೀದಿಸಿ- ಮುತಾಲಿಕ್

ಮಂಗಳೂರು- ಅಕ್ಷಯ ತೃತೀಯ ದಿನದಂದು ಹಿಂದೂಗಳು ಹಿಂದೂಗಳ ಚಿನ್ನದಂಗಡಿಯಲ್ಲೆ ಚಿನ್ನ ಖರೀದಿಸಬೇಕು ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಸಲಹೆ ನೀಡಿದ್ದಾರೆ.

ಮಂಗಳೂರಿನಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ದುಬೈ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳಿಂದ ಚಿನ್ನ ಕೇರಳಕ್ಕೆ ಕಳ್ಳಸಾಗಾಣಿಕೆ ರೂಪದಲ್ಲಿ ಬರುತ್ತದೆ.

ತರುವಾಯ ಕೇರಳದಿಂದ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಸೇರಿದಂತೆ ದೇಶದ
ಇತರೆ ದೇಶಗಳಿಗೆ ಸರಬರಾಜಾಗುತ್ತದೆ ಎಂದರು.

ಕೇಳದ ಚಿನ್ನದ ಮಾಫಿಯಾದಿಂದ ದೇಶಕ್ಕೆ, ಅದರಲ್ಲೂ ಹಿಂದೂ ಧರ್ಮಿಯರಿಗೆ ಅಪಾಯ ಉಂಟಾಗುತ್ತದೆ.

ಆದ ಕಾರಣ ಅಕ್ಷಯ ತೃತೀಯ ಆಗಲಿ ಅಥವಾ ಇನ್ಯಾವುದೇ ದಿನವಾಗಲಿ ಹಿಂದೂ ಧರ್ಮಿಯರು ಹಿಂದೂಗಳ ಚಿನ್ನದಂಗಡಿಯಲ್ಲೆ ಚಿನ್ನ ಖರೀದಿಸಬೇಕು ಎಂದು ಪ್ರಮೋದ್ ಮುತಾಲಿಕ್ ಸಲಹೆ ನೀಡಿದರು.

ಕೇರಳ ರಾಜ್ಯದಲ್ಲಿ ಈ ತನಕ 800 ಕ್ಕೂ ಹೆಚ್ಚು ಹಿಂದೂ ಧರ್ಮಿಯರ ಹತ್ಯೆಯಾಗಿದೆ. ಚಿನ್ನ ಮಾಫಿಯಾದಿಂದ ಬರುವ ಹಣ ಇಂತಹ ಕೊಲೆಗಡುಕರಿಗೆ ಸರಬರಾಜಾಗುತ್ತಿದೆ ಎಂದು ಆರೋಪಿಸಿದರು.

ಆಜಾನ್ ನಂತ ದೇವಸ್ಥಾನದಲ್ಲೂ ಸುಪ್ರಭಾತ

ಕರ್ನಾಟಕದಲ್ಲಿ ಮೇ.9 ರಂದು ಒಂದು ಸಾವಿರ ದೇವಸ್ಥಾನ ಹಾಗೂ ಮಠಗಳಲ್ಲಿ ಮುಂಜಾನೆ 5 ಗಂಟೆಗೆ ಸುಪ್ರಭಾತ ಹಾಗೂ ಓಂಕಾರ ಹಾಕುತ್ತೇವೆ.

ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಹೇಳಿದಂತೆ ನಡೆಸಿ ಸಾಧಿಸುತ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದರು.

 
 
 
 
 
 
 
 
 
 
 

Leave a Reply