ಪ್ರಮೋದ್ ಮಧ್ವರಾಜ್ ರವರಿಗೆ ಕರಾವಳಿಯವರಿಂದ ಗುಲ್ಬರ್ಗದಲ್ಲಿ ಸನ್ಮಾನ

ಕರ್ನಾಟಕ ಸರಕಾರದ ಮಾಜಿ ಸಚಿವ ಹಾಗೂ ಬಿಜೆಪಿಯ ನಾಯಕ ಶ್ರೀ ಪ್ರಮೋದ್ ಮಧ್ವರಾಜ್ ರವರು ಉತ್ತರ ಕರ್ನಾಟಕದ ಪ್ರವಾಸದ ಪ್ರಯುಕ್ತ ಕಳೆದ 2-3 ದಿನದಿಂದ ಗುಲ್ಬರ್ಗದಲ್ಲಿದ್ದರು. ತಮ್ಮ ಕಾರ್ಯಕ್ರಮದ ಒತ್ತಡದ ನಡುವೆಯೂ ತನ್ನ ಅಭಿಮಾನಿಗಳಾದ ಮೂಲತ: ಹೆಬ್ರಿ ಸಂತೆಕಟ್ಟೆಯ ನಿವಾಸಿಗಳಾದ ಸಂತೋಷ್ ಮತ್ತು ಸತೀಶ್ ಪೂಜಾರಿ ಯವರ ಮಾಲಕತ್ವದ ಗುಲ್ಬರ್ಗದ ಹೋಟೆಲ್ ಪಂಚಮಿ ಗೆ ಭೇಟಿ ನೀಡಿದರು.

ಹೋಟೆಲ್ ನ ಬಗ್ಗೆ ಸವಿಸ್ತಾರವಾಗಿ ತಿಳಿದುಕೊಂಡ ಮಾಜಿ ಸಚಿವರು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹೋಟೆಲ್ ಪಂಚಮಿ ವತಿಯಿಂದ ತುಳುವಿನಲ್ಲೇ ಬರೆದ ಸ್ಮರಣಿಕೆಯೊಂದಿಗೆ ಕಡಲ ತಡಿಯ ಅಜಾತಶತ್ರು ಅವರನ್ನು ಗೌರವಿಸಲಾಯಿತು.

 
 
 
 
 
 
 
 
 
 
 

Leave a Reply