ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನಿಂದ ಕೋವಿಡ್ -19 ಜನಜಾಗೃತಿ ಜಾಥಾ

ಉಡುಪಿ: ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೆಡ್ ರಿಬ್ಬನ್ ಕ್ಲಬ್ ಇವರ ಆಶ್ರಯದಲ್ಲಿ ಕೋವಿಡ್-೧೯ ಜನ ಜಾಗೃತಿ ಜಾಥಾವನ್ನುಉಡುಪಿಯ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

ಈ ವೇಳೆ ನಾಗರಿಕರಿಗೆ ಮಾಸ್ಕನ್ನು ವಿತರಿಸಿ ಜನರಲ್ಲಿ ಕೋವಿಡ್– ೧೯ ಎರಡನೇ ಅಲೆಯ ಕುರಿತಾಗಿ ಎಚ್ಚರದಿಂದಿರುವುದು ಹಾಗೂ ಕೊರೋನಾ ಲಸಿಕೆ ತೆಗೆದುಕೊಳ್ಳುವುದು, ಸ್ಯಾನಿಟೈಸರ್‌ನ್ನು ಬಳಸುವುದು, ಕೊರೋನ ಲಕ್ಷಣಗಳಿದ್ದಲ್ಲಿ ಶೀಘ್ರ ಪರೀಕ್ಷೆ ಮಾಡಿಕೊಳ್ಳುವುದರ ಕುರಿತಾಗಿ ಜಾಗೃತಿ ಮೂಡಿಸಲಾಯಿತು.ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ರಮಾನಂದ ರಾವ್, ಶ್ರೀಲತಾ ಆಚಾರ್ಯ ಹಾಗೂ ರೆಡ್ ಕ್ರಾಸ್ ಘಟಕದ ಸಂಯೋಜಕ ಸಂತೋಷ್ ಕುಮಾರ್ ಜಾಥಾದಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದರು.

 
 
 
 
 
 
 
 
 
 
 

Leave a Reply