ಉಡುಪಿ ಅಂಚೆ ಮನೋರಂಜನ ಕೂಟದದ ವತಿಯಿಂದ ಬೀಳ್ಕೊಡುಗೆ

ಅಂಚೆ ಇಲಾಖೆಯಲ್ಲಿ 40ವರ್ಷ ಸುದೀರ್ಘ ಸೇವೆ ಸಲ್ಲಿಸಿದ ನಿವೃತ್ತಿ ಹೊಂದಿದ ಅಂಚೆ ಮೇಲ್ವಿಚಾರಕ ಶ್ರೀ ವಾಸುದೇವ ತೊಟ್ಟಂ ಹಾಗೂ ಅಂಚೆ ಅಣ್ಣನಾಗಿ 23 ವರ್ಷ ಸೇವೆ ಸಲ್ಲಿಸಿದ ಶ್ರೀ ಕೃಷ್ಣ ಶೆಟ್ಟಿಗಾರ್ ಇವರನ್ನು ಉಡುಪಿ ಅಂಚೆ ಮನೋರಂಜನೆ ವತಿಯಿಂದ ಬೀಳ್ಕೊಡಲಾಯಿತು.

ಅಂಚೆ ಇಲಾಖೆಯ 2 ಯೂನಿಯನ್ ವತಿಯಿಂದ ಐತಿಹಾಸಿಕವಾಗಿ ಬೀಳ್ಕೊಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಅಂಚೆ ಅಧೀಕ್ಷಕರಾದ ಶ್ರೀಯುತ ನವೀನ್ ಚಂದರ್ ವಹಿಸಿದ್ದರು. ವೇದಿಕೆಯಲ್ಲಿ ಉಪ ಅಂಚೆ ಅಧೀಕ್ಷಕರಾದ ಶ್ರೀ ಜಯರಾಮ ಶೆಟ್ಟಿ, ಅಂಚೆ ಪಾಲಕರಾದ ಶ್ರೀ ಗುರುಪ್ರಸಾದ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸುರೇಶ್ ಕೆ, ವಿಜಯನಾಯರಿ, ಸುಹಾಸ್, ಜನಾರ್ಧನ್, ಸುಭಾಸ್, ಪ್ರವೀಣ್ ಜತ್ತನ್, ಉದಯ್, ಪೂರ್ಣಿಮ ಜನಾರ್ಧನ್,ಜಯಶ್ರೀ ಮಲ್ಯ ಮತ್ತಿತರರು ಹಾಜರಿದ್ದರು. ಸುರೇಂದ್ರ ಕೋಟ್ಯಾನ್ ಪ್ರಾರ್ಥಿಸಿ ಕಾರ್ಯಕ್ರಮದ ನಿರೂಪಣೆ ನರಸಿಂಹ ನಾಯಕ್ ಮಾಡಿದರು ಉಮೇಶ್ ನಾಯಕ್ ವಂದಿಸಿದರು.

 
 
 
 
 
 
 
 
 
 
 

Leave a Reply