ಉಡುಪಿ ಅಂಚೆ ವಿಭಾಗ ಸ್ವಚ್ಚತಾ ಪಕವಾಡ್ ಪ್ರಯುಕ್ತ ಆಯೋಜಿಸಿದ್ದ ಸ್ವಚ್ಚ ಭಾರತ್ ಮಿಷನ್ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ 

ಭಾರತೀಯ ಅಂಚೆ ಇಲಾಖೆ,ಉಡುಪಿ ಅಂಚೆ ವಿಭಾಗ ಸ್ವಚ್ಚತಾ ಪಕವಾಡ್ ಪ್ರಯುಕ್ತ ಆಯೋಜಿಸಿದ್ದ ಸ್ವಚ್ಚ ಭಾರತ್ ಮಿಷನ್ ಪ್ರಬಂಧ ಸ್ಪರ್ಧೆಯಲ್ಲಿ ಅಭಿಷೇಕ್ ಜಯಂತ್ ಹೊಳ್ಳ ಪ್ರಥಮ ಸ್ಥಾನ, ವೃಂದಾ ಚಡಗಾ ದ್ವಿತೀಯ ಸ್ಥಾನ ಹಾಗು ಚಿರಂತನ್ ಪದ್ಮಶಾಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಸ್ವಚ್ಚತಾ ಪೋಸ್ಟರ್ ಬಗ್ಗೆ ನಡೆದ ಸ್ಪರ್ಧೆಯಲ್ಲಿ ರೋಹಿತ್ ಆಚಾರ್ಯ ಪ್ರಥಮ ಸ್ಥಾನ, ಅಕ್ಷಯ್ ದೇವಾಡಿಗ ದ್ವಿತೀಯ, ಅಲ್ಅಫ್ರಾಹ್ ತೃತೀಯ ಸ್ಥಾನ ಪಡೆದಿದ್ದು ಉಡುಪಿ ಅಂಚೆ ಅಧೀಕ್ಷಕರ ಕಚೇರಿಯಲ್ಲಿ ‌ನಡೆದ ಸರಳ ಸಮಾರಂಭದಲ್ಲಿ ಅಂಚೆ ಅಧೀಕ್ಷಕ ಶ್ರೀ ನವೀನ್ ಚಂದರ್ ಬಹುಮಾನ ವಿತರಣೆ ನಡೆಸಿಕೊಟ್ಟರು. ಸಹಾಯಕ ಅಧೀಕ್ಷಕ ಕೃಷ್ಣ ರಾಜ ವಿಠಲ ಭಟ್ ಹಾಗು ಧನಂಜಯ ಆಚಾರ್ ಹಾಗು ಅಂಚೆ ಇಲಾಖಾ ಸಿಬ್ಬಂದಿ ಸವಿತಾ ಶೆಟ್ಟಿಗಾರ್ , ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply