ಶ್ರೀ ಕೃಷ್ಣಾಪುರ ಮಠದ ವಿಶೇಷ ಅಂಚೆ ಲಕೋಟೆ ಲೋಕಾರ್ಪಣೆ

ಭಾರತೀಯ ಅಂಚೆ ಇಲಾಖೆ ಉಡುಪಿ ಅಂಚೆ ವಿಭಾಗದಿಂದ ಕೃಷ್ಣಾಪುರ ಪರ್ಯಾಯದ ಈ ಸುಸಂಧರ್ಭದಲ್ಲಿ ಕೃಷ್ಣಾಪುರ ಪರ್ಯಾಯದ ವಿಶೇಷ ಅಂಚೆ ಲಕೋಟೆಯನ್ನು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ರವರು ಕೃಷ್ಣಮಠದ ರಾಜಾಂಗಣದಲ್ಲಿ ಪರ್ಯಾಯದ ಸುಸಂಧರ್ಭದಲ್ಲಿ ಬಿಡುಗಡೆ ಗೊಳಿಸಿದರು.

ಪೂಜ್ಯ ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿದರು. ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭ ತೀರ್ಥ ಶ್ರೀ ಪಾದರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶ್ರೀ ಮಠದ ವಿದ್ವಾಂಸ ಗೋಪಾಲ ಕೃಷ್ಣ ಉಪಾಧ್ಯಾಯ, ಉಡುಪಿ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠಲ ಭಟ್, ಕಚೇರಿ ಸಹಾಯಕಿ ಲೀಲಾವತಿ ತಂತ್ರಿ , ಮಾರ್ಕೆಟಿಂಗ್ ಎಕ್ಸಿಕ್ಯುಟಿವ್ ಪೂರ್ಣಿಮಾ ಜನಾರ್ದನ್ ಉಪಸ್ಥಿತಿತರಿದ್ದರು.

ಪ್ರತೀ ಪರ್ಯಾಯ ಸಮಯದಲ್ಲಿ ಬಿಡುಗಡೆ ಗೊಳ್ಳುವ ಈ ವಿಶೇಷ ಅಂಚೆ ಲಕೋಟೆಗಳನ್ನು ಪ್ರದೀಪ್ ಕುಮಾರ ಕಲ್ಕೂರ್, ಕಲ್ಕೂರ ಪ್ರತಿಷ್ಟಾನ ಮಂಗಳೂರು ಇವರು ಪ್ರಾಯೋಜಿಸುತ್ತಿದ್ದಾರೆ.

 
 
 
 
 
 
 
 
 
 
 

Leave a Reply