ಉಡುಪಿ ಅಂಚೆ ವಿಭಾಗ- ಸ್ವಚ್ಚತಾ ಪರಿಕರಗಳ ವಿತರಣೆ:

ಭಾರತೀಯ ಅಂಚೆ ಇಲಾಖೆಯ ವತಿಯಿಂದ ನಡೆಯುತ್ತಿರುವ ಸ್ವಚ್ಚತಾ ಪಾಕ್ಷಿಕದ ಅಂಗವಾಗಿ ವಿದ್ಯಾರ್ಥಿಗಳ ಸ್ವಚ್ಛತೆಗೆ ಆದ್ಯತೆ ನೀಡುವ ಸಲುವಾಗಿ ಅವರಿಗೆ ಅಗತ್ಯತೆ ಇರುವ ಸೋಪು ಹಾಗು ಸ್ಯಾನಿಟೈಸರ್ ಗಳನ್ನು ಸಾಂಕೇತಿಕವಾಗಿ ವಿತರಿಸುವ ಮೂಲಕ ನಾವು ಮಕ್ಕಳಿಗೆ ಹತ್ತಿರವಾಗಿದ್ದೇವೆ ಎಂದು ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ನವೀನ್ ಚಂದರ್ ಅಭಿಪ್ರಾಯ ಪಟ್ಟರು.

ಭಾರತೀಯ ಅಂಚೆ ಇಲಾಖೆ ,ಉಡುಪಿ ಅಂಚೆ ವಿಭಾಗದಿಂದ ಸ್ವಚ್ಚತಾ ಪಾಕ್ಷಿಕದ ಅಂಗವಾಗಿ ಉಡುಪಿ ಕುಕ್ಕಿಕಟ್ಟೆಯ ಶ್ರೀ ಕೃಷ್ಣ ಬಾಲನಿಕೇತನದ ವಿದ್ಯಾರ್ಥಿಗಳಿಗೆ ದಿನಬಳಕೆಗೆ ಸೋಪು ಹಾಗು ಸ್ಯಾನಿಟೈಸರ್ ವಿತರಿಸಿ ಅವರು ಮಕ್ಕಳಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಜಯರಾಮ ಶೆಟ್ಟಿ,ಶ್ರೀ ಕೃಷ್ಣ ಬಾಲನಿಕೇತನದ ರಾಮಚಂದ್ರ ರಾವ್ ,ಅಂಚೆ ಇಲಾಖೆಯ ಸಿಬ್ಬಂದಿಗಳಾದ ಸರ್ವೋತ್ತಮ ,ಸವಿತಾ ಶೆಟ್ಟಿಗಾರ್,ಪೂರ್ಣಿಮಾ ಜನಾರ್ದನ್, ನಿತೇಶ್ ಹಾಗು ಶ್ರೀ ಕೃಷ್ಣ ಬಾಲನಿಕೇತನದ ಸಿಬ್ಬಂದಿಗಳು ಹಾಗು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply