ಉಡುಪಿ ಜಿಲ್ಲಾ ಹೈಸ್ಕೂಲ್ ವಿದ್ಯಾರ್ಥಿಗಳ ನಾಟಕ ಸ್ಪರ್ಧೆ

ಕರ್ನಾಟಕ ನಾಟಕ ಅಕಾಡೆಮಿಯು, ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಹೈಸ್ಕೂಲ್ ವಿದ್ಯಾರ್ಥಿಗಳಲ್ಲಿ ನಾಟಕದ ಆಸಕ್ತಿ ಮೂಡಿಸುವ ಸಲುವಾಗಿ ರಾಜ್ಯ ಮಟ್ಟದ ಕನ್ನಡ ನಾಟಕ ಸ್ಪರ್ಧೆಯನ್ನು ಜಿಲ್ಲಾವಾರು ಏರ್ಪಡಿಸಿ, ಅಲ್ಲಿಂದ ಒಂದು ತಂಡ ರಾಜ್ಯ ಮಟ್ಟದ ಸ್ಪರ್ಧೆ ಗೆ ಆಯ್ಕೆ ಮಾಡಿ, ತದನಂತರ ಜಿಲ್ಲಾವಾರು ಆಯ್ಕೆಯಾದ ನಾಟಕಗಳ ರಾಜ್ಯ ಮಟ್ಟದ ಸ್ಪರ್ಧೆಯು ಬೆಂಗಳೂರಿನಲ್ಲಿ ನಡೆಸಲಿದೆ.

ಇದೀಗ ಉಡುಪಿ ಜಿಲ್ಲಾ ಹೈಸ್ಕೂಲ್ ವಿದ್ಯಾರ್ಥಿಗಳ ನಾಟಕ ಸ್ಪರ್ಧೆಯನ್ನು, ಜಿಲ್ಲೆಯ ಕ್ರೀಯಾಶೀಲಾ ರಂಗತಂಡಗಳಲ್ಲಿ ಒಂದಾದ ಸುಮನಸಾ ಕೊಡವೂರು (ರಿ.) ಇವರು ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಉಡುಪಿ ಜಿಲ್ಲಾ ಶಿಕ್ಷಣ ಇಲಾಖೆಯ ಸಹಕಾರದೊಂದಿಗೆ ಇದೇ ಸೆಪ್ಟೆಂಬರ್ 20 ಮಂಗಳವಾರ ಉಡುಪಿ – ಮಲ್ಪೆಯ ಫಿಶರೀಸ್ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದೆ.

ಜಿಲ್ಲೆಯ ವಿವಿಧ ಭಾಗಗಳಿಂದ ಬರುವ ಪ್ರೌಢಶಾಲೆಯ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ಮರೆಯದೆ ಬನ್ನಿ.

 
 
 
 
 
 
 
 
 
 
 

Leave a Reply