ಕೊರೊನಾದ ತೀವ್ರತೆಯ ನಡುವೆಯೂ ಮುಖ್ಯಮಂತ್ರಿ ಬದಲಾವಣೆ ಬಿ.ಜೆ.ಪಿ ಯ ವಿಪರ್ಯಾಸ ~ ಮಾಜಿ ಸಚಿವ ಸೊರಕೆ

ಒಂದು ಕಡೆ ಇಡೀ ದೇಶದಲ್ಲಿ ಕೊರೊನಾ ತಾಂಡವವಾಡುತ್ತಾ ಮರಣ ಮೃದಂಗ ಬಾರಿಸುತ್ತಿದ್ದರೆ, ಇತ್ತ ರಾಜ್ಯದ ಮುಖ್ಯಮಂತ್ರಿ ಬಡಲಾವಣೆಯಲ್ಲಿ ಬಿ. ಜೆ.ಪಿ ಯು ವ್ಯಸ್ತವಾಗಿರುವುದು ನಿಜಕ್ಕೂ ವಿಪರ್ಯಾಸವೆನಿಸಿದೆ. ಬಿ.ಜೆ. ಪಿಯ ಈ ನಡೆ ರೋಮ್ ನಗರ ಒಂದೆಡೆ ಹೊತ್ತಿ ಉರಿಯುತ್ತಿರುವ ಸಂಧರ್ಭದಲ್ಲಿ  ಚಕ್ರವರ್ತಿ  ಪಿಟೀಲು ಬಾರಿಸಿತ್ತಿದ್ದ ಎಂಬ ಗಾಧೆ ನೆನಪಿಸುವಂತಿದೆ  ಎಂದು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಹೇಳಿದರು.
ದಿನೇ ದಿನೇ ಸಹಸ್ರಾರು ಸಾವುಗಳು ಕೊರೊನಾ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಸಂಭವಿಸುತ್ತಿದ್ದರೂ, ಅಸಮರ್ಪಕ ಆಕ್ಸಿಜನ್ ಸರಬರಾಜು ಬೆಡ್ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ, ವ್ಯಾಕ್ಸಿನ್ ಮತ್ತು ಔಷದಿ ಸರಬರಾಜಿ ನಿಂದಾಗಿ ರಾಜ್ಯದ ಜನರು ಪಡುತ್ತಿದ್ದ ಬವಣೆಯನ್ನು ಕಂಡು ತಾಳಲಾರದೆ ಉಚ್ಚ ನ್ಯಾಯಾಲಯವು  ಸ್ವಯಂ ಪ್ರೇರಿತವಾಗಿ ಮಧ್ಯಪ್ರವೇಶಿಸಿ ಸರಕಾರಕ್ಕೆ ಛೀಮಾರಿ ಹಾಕಿ ಕೂಡಲೇ ಎಲ್ಲ ಅಗತ್ಯ ಸೌಲಭ್ಯಗಳನ್ನುಕಲ್ಪಿಸಲು  ಸರಕಾರಕ್ಕೆ ಆದೇಶಿಸಿರುವುದು ರಾಜ್ಯ ಸರಕಾರದ ಆಡಳಿತ  ವೈಫಲ್ಯಕ್ಕೆ ಸಾಕ್ಷಿಯಾಗಿದೆ, ಆದರೂ ತನಗಾದ ಮುಖಭಂಗವನ್ನು ತಪ್ಪಿಸಲು ಉಚ್ಚನ್ಯಾಯಾಲಯದ ಆದೇಶಕ್ಕೆ ವಿರುದ್ಧವಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿ ಸಲ್ಲಿಸಿದ ಸರಕಾರದ  ಮೇಲ್ಮನವಿಗೆ ಹಿನ್ನಡೆಯಾಗಿ ಹೈಕೋರ್ಟ್ ಆದೇಶವನ್ನು ಎತ್ತಿ  ಹಿಡಿದಿರುವುದು ತೀವ್ರ ಮುಖಭಂಗ ಅನುಭವಿಸುವಂತಾಗಿತ್ತು.
ಇದೆಲ್ಲ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಬಿ. ಜೆ.ಪಿ ಹೈಕಮಾಂಡ್, ಪಕ್ಷಕ್ಕಾದ ಮುಜುಗರದಿಂದ ತಪ್ಪಸಿಕೊಳ್ಳಲು ಮತ್ತು ಹಾನಿಯಾದ ವರ್ಚಸ್ಸನ್ನು ಸರಿಪಡಿಸುವ ಕಾರಣವನ್ನು ಮುಂದಿಟ್ಟು ಈಗ ಮುಖ್ಯಮಂತ್ರಿ ಬದಲಾವಣೆಗೆ ಹೊರಟಿರುವುದು ಬಿ. ಜೆ.ಪಿ ಯು  ಜನಪರ ಕಾಳಜಿ ಇಲ್ಲದ, ಅಧಿಕಾರ ದಾಹಿ ಪಕ್ಷ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಸೊರಕೆಯವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವರಲ್ಲೊಬ್ಬರಾದ ಡಿ. ವಿ. ಸದಾನಂದ ಗೌಡರು ಕೇಂದ್ರ ದಿಂದ ರಾಜ್ಯಕ್ಕೆ ದೊರಕಬೇಕಾದ ಎಲ್ಲಾ ಕೋವಿಡ್ ನಿರ್ವಹಣಾ  ಸೌಲಭ್ಯ ಗಳನ್ನು ಈಗಾಗಲೇ ಒದಗಿಸಲಾಗಿದ್ದು ತನ್ನ ಜವಾಬ್ದಾರಿಯನ್ನು ನಿಭಾಯಿಸಿದೆ, ಇನ್ನು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ರಾಜ್ಯ ಸರಕಾರದ ಕರ್ತವ್ಯ ಎಂದು ಹೊಣೆ ಗೇಡಿತನದ  ಹೇಳಿಕೆಯನ್ನು ನೀಡಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಾರೆ. 
ರಾಜ್ಯದ ಪಾಲಿಗೆ ನ್ಯಾಯಯುತವಾಗಿ ಬರಬೇಕಿದ್ದ ಜಿ.ಎಸ್.ಟಿ ಸಂಗ್ರಹದ ಸಹಸ್ರಾರು ಕೋಟಿ ರೂಪಾಯಿಗಳನ್ನು ಕೇಂದ್ರ ಸರಕಾರ ನೀಡದೆ ವಂಚಿಸಿದೆ, ಕಳೆದ ಎರಡು- ಮೂರು ವರುಷಗಳಿಂದ  ರಾಜ್ಯವು ತೀವ್ರವಾದ ಅತಿ ವೃಷ್ಟಿ- ಅನಾವೃಷ್ಟಿಗೆ ತುತ್ತಾಗಿದ್ದರೂ ಇನ್ನೂ ಕೂಡ ಪರಿಹಾರ ಹಣ ಬಿಡುಗಡೆ ಮಾಡದೆ ಮಲತಾಯಿ ಧೋರಣೆ ಆನುಸರಿಸುತ್ತಿದ್ದು. ಒಟ್ಟಾರೆ  ಕೇಂದ್ರ ಸರಕಾರವು  ರಾಜ್ಯ ಸರಕಾರದೊಂದಿಗೆ ತಾರತಮ್ಯ  ಧೋರಣೆಯನ್ನು ಅನುಸರಿಸುತ್ತಿದ್ದರೂ ರಾಜ್ಯದ ಸಂಸದರು ಪ್ರಧಾನಿಯ ಮುಂದೆ ನಿಂತು ರಾಜ್ಯದ ಹಿತಾಸಕ್ತಿ ಬಗ್ಗೆ ಗಟ್ಟಿ ಧ್ವನಿಯಲ್ಲಿ ಮಾತನಾಡಲು ಏಕೆ ಹಿಂಜರಿಯುತ್ತಿದ್ದಾರೆ ಎಂದು ಮಾಜಿ ಸಚಿವರು ಪ್ರಶ್ನಿಸಿದ್ದಾರೆ.
ಕೊರೊನಾ ಎರಡನೇ ಅಲೆಯು ಭೀಕರವಾಗಿ ಮುಂದುವರಿದಿದ್ದು ಸರಕಾರ  ಸೋಂಕಿತರ ಮತ್ತು ಮೃತ ಪಟ್ಟವರ ನೈಜ ಅಂಕಿ ಅಂಶಗಳನ್ನು ಮರೆಮಾಚುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿಗೆ ಸಲಹೆ-  ಸಹಕಾರವನ್ನು ನೀಡಿ ಹುರಿದುಂಬಿಸಿ ಸರಕಾರ ಮುನ್ನಡೆಸಲು ಬೆಂಬಲಿಸುವ ಬದಲು ಮುಖ್ಯಮಂತ್ರಿಯನ್ನು
ಬದಲಾಯಿಸಿ ತಮ್ಮ ಆಪ್ತೇಷ್ಠರನ್ನು ಕುರ್ಚಿಯಲ್ಲಿ  ಕುಳ್ಳಿರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಬಿ ಜೆ.ಪಿ ಯ ಹೈ- ಕಮಾಂಡಿನ ಹುನ್ನಾರ ಅಧಿಕಾರ-ದಾಹದ ಪರಮಾವಧಿ ನೆಗೆಪಾಟೀಲಿಗೆ ಈಡಾಗಿದೆ.  
 
ಅನೇಕ ಶಾಸಕರು ,ಸಂಸದರು  ಮತ್ತು ಬಿ. ಜೆ. ಪಿ ಯ ಹಿರಿಯ ನಾಯಕರು ಹಲವಾರು ಬಾರಿ ಗುಪ್ತ- ಸಭೆ ಗಳನ್ನು ನಡೆಸಿರುವುದು, ಈಗಲೂ ಹಲವಾರು ಶಾಸಕರು ದೆಹಲಿಯಲ್ಲಿ ಹೈ-ಕಮಾಂಡ್ ಕದ ತಟ್ಟುತ್ತಿರು ವುದು ಮುಖ್ಯಮಂತ್ರಿ ಬದಲಾವಣೆಯ ಪ್ರಕ್ರಿಯೆಯ ಭಾಗವಾಗಿದ್ದಂತೆ ಕಂಡು ಬಂದರೆ, ರಾಜ್ಯದಲ್ಲಿ ಚುನಾಯಿತ
ಶಾಸಕಾಂಗದ ಪ್ರತಿನಿಧಿಗಳ ಸರಕಾರ  ಅಸ್ತಿತ್ವದಲ್ಲಿದ್ದರೂ,  ಇತ್ತೀಚೆಗೆ ಕೇಂದ್ರ ಸರಕಾರವು ರಾಜ್ಯಪಾಲರಿಗೆ ಸೂಚನೆ ನೀಡಿ ​ಕೋವಿಡ್ ನಿರ್ವಹಣಾ ಸಮಿತಿ ​ಸಭೆ ನಡೆಸಿರುವುದು ಮುಖ್ಯಮಂತ್ರಿ ಗಳ ಆಡಳಿತ ವೈಖರಿಯಲ್ಲಿ ಕೇಂದ್ರವು ಸಂತೃಪ್ತಿ ಹೊಂದಿಲ್ಲ ಎನ್ನುವುದಕ್ಕೆ ಸಾಕ್ಷಿಯಾದರೆ, ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆಗೆ ಮತ್ತಷ್ಟು ಪುಷ್ಟಿ ನೀಡುವಂತಿದೆ ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರು ಹೇಳಿದ್ದಾರೆ.
 
 
 
 
 
 
 
 
 
 
 

Leave a Reply