ಮುತಾಲಿಕರ ಬಗ್ಗೆ ಮಾತನಾಡುವಾಗ ಕುಯಿಲಾಡಿಯವರ ನಾಲಿಗೆ ಹಿಡಿತದಲ್ಲಿರಲಿ ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಎಚ್ಚರಿಕೆ!

ಇಡೀ ದಕ್ಷಿಣ ಭಾರತದಲ್ಲಿ ಹಿಂದುತ್ವದ ರಣಕಹಳೆ ಊದಿದ ಹಾಗೂ ಬಿಜೆಪಿಗೆ ಭದ್ರ ಬುನಾದಿ ಹಾಕಿದ ಪ್ರಮೋದ್ ಮುತಾಲಿಕರ ಬಗ್ಗೆ ಇತ್ತೀಚೆಗೆ ಉಡುಪಿಯಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಜಿಲ್ಲಾಧ್ಯಕ್ಷನ ಬಗ್ಗೆ ಮರುಕ ಹುಟ್ಟಿಸುತ್ತಿದೆ. ಹಿಂದುತ್ವಕ್ಕಾಗಿ ಕಳೆದ 48 ವರ್ಷದಿಂದ ಬ್ರಹ್ಮಚಾರಿಯಾಗಿದ್ದು ಹಿಂದುತ್ವದ ಧ್ವನಿಯಾಗಿ ಹಿಂದೂ ಜನ ಸಮಾಜದ ಮನ ಗೆದ್ದಿರುವ ಪ್ರಮೋದ್ ಮುತಾಲಿಕ್ ರವರ ಬಗ್ಗೆ ಮಾತನಾಡುವಾಗ ಜಾಗೃತಿ ಇರಲಿ. ಕಳೆದ ಕೆಲವು ವರ್ಷಗಳ ಹಿಂದೆ ತಾನು ಅಧಿಕಾರಕ್ಕೆ ತಂದ ಬಿಜೆಪಿಯು ಬೆಳಿಗ್ಗೆ ಪಕ್ಷಕ್ಕೆ ಸೇರ್ಪಡೆಸಿಕೊಂಡು ಕೇವಲ ನಾಲ್ಕೇ ಗಂಟೆಗಳ ನಂತರ ಪಕ್ಷದಿಂದ ಉಚ್ಛಾಟನೆ ಮಾಡಿದಂತ ಪ್ರಸಂಗ ನಿಮಗೆ ನೆನಪಿದೆಯೇ? ಬಹುಶಃ ಉಡುಪಿಯಲ್ಲಿ ಬೆತ್ತಲೆ ಪ್ರಕರಣ ಆಗುವಾಗ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರಿಗೆ ಕಲ್ಲು ಹೊಡೆಸಿದ ವ್ಯಕ್ತಿ ನಿಮಗೆ ನೆನಪಿದೆಯೇ? ಅಂತ ವ್ಯಕ್ತಿಯನ್ನೇ ನೀವುಗಳು ಜಿಲ್ಲಾಧ್ಯಕ್ಷರಾಗಿ ನೇಮಕ ಮಾಡಿದ ಮೇಲೆ, ನಿಮ್ಮದು ಯಾವ ಹಿಂದುತ್ವ?! ಇಷ್ಟೆಲ್ಲ ನಿಮಗೆ ಗೊತ್ತಿದ್ದರೂ, ಕಟ್ಟರ್ ಹಿಂದುತ್ವವಾದಿ ಪ್ರಮೋದ್ ಮುತಾಲಿಕರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿದೆಯೇ? ಬಿಜೆಪಿಯನ್ನು ದಕ್ಷಿಣ ಭಾರತದ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾರಣೀಭೂತರಾದ ಪ್ರಮೋದ್ ಮುತಾಲಿಕ್ ಅವರ ಬಗ್ಗೆ ನೀವು ಅವಹೇಳನ ಮಾಡಿ 3000 ಮತಗಳು ಪಡೆಯಲ್ಲ ಎಂದು ಹೇಳಿದ್ದು ನಿಮ್ಮ ಮುಖ ಕನ್ನಡಿಗೆ ಸೀಮಿತ. ಅದೇ 3000ಕ್ಕಿಂತಲೂ ಅಧಿಕ ಮತಗಳಿಂದ ಅವರು ಚುನಾಯಿತರಾಗಿ ಆಯ್ಕೆಯಾಗುತ್ತಾರೆ. ಮತ್ತು ನಿಮಗೆ ಚುನಾವಣಾ ಹುಚ್ಚು ಇದ್ದರೆ ನೀವು ಪಕ್ಷೇತರರಾಗಿ ನಮ್ಮ ಕಾರ್ಯಕರ್ತರ ಎದುರು ನಿಲ್ಲಿ, ನಿಮ್ಮ ಎದುರಿಗೆ ನಮ್ಮ ಕಾರ್ಯಕರ್ತರು 100 ಮತಗಳನ್ನಾದರೂ ಅಧಿಕ ಪಡೆಯುತ್ತಾರೆ ಎಂದು ಉಡುಪಿ ಜಿಲ್ಲೆಯ ಶ್ರೀರಾಮ ಸೇನೆಯ ಅಧ್ಯಕ್ಷ ಕುಯಿಲಾಡಿಯವರಿಗೆ ನೇರಸವಾಲ್ ಹಾಕಿದ್ದಾರೆ.

 
 
 
 
 
 
 
 
 
 
 

Leave a Reply