ಉಡುಪಿ: ಬಿಜೆಪಿ ಪಕ್ಷದ ಸಿದ್ಧಾಂತ ಸ್ವೀಕರಿಸಿ ಬರುವುದಾದರೆ ಪ್ರಮೋದ್ ಮಧ್ವರಾಜ್’ಗೆ ಸ್ವಾಗತ ಎಂದು ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿ ಎಂದರು. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ನಾಯಕರ ಒಳ್ಳೆಯ ವಿಚಾರ ಸ್ವೀಕರಿಸಲು ಪ್ರಾರಂಭಿಸಿರುವುದು ಸಂತೋಷದ ವಿಚಾರ ಎಂದರು.
ಅವರು ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಮೋದ್ ಮಧ್ವರಾಜ್ ಅವರು ಇತ್ತೀಚೆಗೆ ಮೋದಿಯವರನ್ನು ಹೊಗಳಿದ ವಿಚಾರ ತಿಳಿಯಿತು. ಕೊನೆಗೂ ಅವರು ಬಿಜೆಪಿ ಮತ್ತು ಅದರ ನಾಯಕರ ಒಳ್ಳೆಯ ವಿಚಾರಗಳನ್ನು ಸ್ವೀಕಾರ ಮಾಡಿದ್ದಾರೆ. ಅವರು ಬಿಜೆಪಿಗೆ ಬರುವ ವಿಚಾರವನ್ನು ಅವರು ತೀರ್ಮಾನ ಮಾಡಬೇಕು. ಆದರೆ ಅವರು ಬರಬೇಕೋ ಬೇಡವೋ ಎನ್ನುವುದರ ಕುರಿತು ನಮ್ಮ ನಾಯಕರು ಮತ್ತು ಕಾರ್ಯಕರ್ತರು ಆಲೋಚನೆ ಮಾಡುತ್ತಾರೆ.
ದನ ಬಂದ್ರೆ ಕರು ಬಂದೆ ಬರುತ್ತೇ ಎಂದು ಹೇಳುತ್ತಿದ್ದರು. ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಈ ಮೊದಲೇ ಎರಡು ಬಾರಿ ಕಹಿ ಅನುಭವ ಪಕ್ಷಕ್ಕೆ ಆಗಿದೆ. ಪಕ್ಷದ ಸಿದ್ಧಾಂತ ಒಪ್ಪಿ ಬರುವುದಾದರೆ ಸ್ವಾಗತ, ಅವರ ಮಾನಸಿಕತೆ ಹೇಗಿದೆಂದು ತಿಳಿಯುತ್ತಿಲ್ಲ. ಆದರೆ ಸೇರಿಸುವ ಮುನ್ನ ಸ್ಥಳೀಯ ಕಾರ್ಯಕರ್ತರು, ನಾಯಕರೊಂದಿಗೆ ಸಮಾಲೋಚನೆ ಮಾಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.