ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ “ನೃತ್ಯೋತ್ಸವ 2022”

ನೃತ್ಯನಿಕೇತನ ಕೊಡವೂರು ಕಲಾವಿದರು ಮತ್ತು ನೃತ್ಯನಿಕೇತನ ಕೊಡವೂರಿನ ಎಲ್ಲಾ ಶಾಖೆಯ ವಿದ್ಯಾರ್ಥಿಗಳು ಅರ್ಪಿಸುತ್ತಿರುವ ನೃತ್ಯೋತ್ಸವ2022 ದಿನಾಂಕ 17 ಮತ್ತು 18 ಡಿಸೆಂಬರ್ ( ಶನಿವಾರ ಭಾನುವಾರ) ಸಂಜೆ 6-45 ಕ್ಕೆ ಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ.ಕೃಷ್ಣಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದಂಗಳವರು ದೀಪ ಪ್ರಜ್ವಲನೆ ಮಾಡಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿಯ ಸಹಾಯಕ ನಿರ್ದೇಶಕರಾಗಿರುವ ಶ್ರೀಮತಿ ಪೂರ್ಣಿಮಾ, ಹಿರಿಯಡ್ಕ ಸಂಸ್ಕೃತಿ ಸಿರಿ ಟ್ರಸ್ಟ್ ನ ಮ್ಯಾನೇಜಿಂಗ್ ಡೈರೆಕ್ಟರ್ ಪ್ರೊ|| ಮುರಳೀಧರ ಉಪಾಧ್ಯ ಹಿರಿಯಡ್ಕ,ವಿಶ್ವಸಂಸ್ಕೃತಿ ಸಿರಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ವಿಶ್ವನಾಥ್ ಶೆಣೈ ಯವರು ಕಾರ್ಯಕ್ರಮದ ಅತಿಥಿಗಳಾಗಿ ಉಪಸ್ಥಿತರಿರುವರು .ಎರಡೂ ದಿವಸಗಳಲ್ಲಿ ಸಂಸ್ಥೆಯ ಸುಮಾರು 240 ಕ್ಕೂ ಅಧಿಕ ನೃತ್ಯವಿದ್ಯಾರ್ಥಿಗಳು ನೃತ್ಯಪ್ರದರ್ಶನ ನೀಡಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ಸುಧೀರ್ ರಾವ್ ಕೊಡವೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

 
 
 
 
 
 
 
 
 

Leave a Reply