ರಾಮನಗರ ಸರ್ಕಾರಿ ಕಾರ್ಯಕ್ರಮ ದಲ್ಲಿ ಮುಖ್ಯಮಂತ್ರಿ ಸಮ್ಮುಖ ಸಂಸದ ಡಿಕೆ ಸುರೇಶ್ ರ ಗೂ0ಡಾ ವರ್ತನೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಖಂಡಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಅಧಿಕಾರ ಕಳೆದುಕೊಂಡ ನಂತರ ಹತಾಶರಾಗಿದ್ದು,ಮುಖ್ಯಮಂತ್ರಿ ಮುಂದೆ ವೇದಿಕೆಯಲ್ಲಿ ಸಚಿವರಿಗೆ ಭಾಷಣ ಮಾಡಲು ಅವಕಾಶ ನೀಡದೆ ಏರು ಧ್ವನಿಯಲ್ಲಿ ತೀರ ಕೆಳ ಮಟ್ಟದ ರಾಜಕಾರಣವನ್ನು ಸಂಸದ ಡಿಕೆ ಸುರೇಶ್ ಮಾಡಿದ್ದಾರೆ.
ರಾಜ್ಯದ ಜನ ಈ ಎಲ್ಲಾ ಘಟನೆಗಳನ್ನು ಗಮನಿಸಿದ್ದು ಇಂತಹ ಗೂ0ಡಾ ವರ್ತನೆಗೆ ತಕ್ಕ ಉತ್ತರವನ್ನು ಮುಂದಿನ ದಿನಗಳಲ್ಲಿ ನೀಡಲಿದ್ದಾರೆಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯನಾ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.