ವಿಧಾನಪರಿಷತ್ ಘಟನೆ ​ತುಂಬಾ ನೋವುಂಟು ಮಾಡಿದೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮೈಸೂರು: ಪ್ರಜಾಪ್ರಭುತ್ವದ ದೇವಾಲಯಲ್ಲಿ ನಿನ್ನೆ ನಡೆದ ಘಟನೆ ಅವಮಾನಕರ. ಈ ಘಟನೆಗೆ ಮೂರು ಪಕ್ಷಗಳು ಕಾರಣ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.​ ನಗರದಲ್ಲಿ ನಡೆಯತ್ತಿರುವ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಭಾಗವಹಿಸಲು ಬುಧವಾರ ಮೈಸೂರಿಗೆ ಆಗಮಿಸಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಇತಿಹಾಸ ಇರುವ ವಿಧಾನಪರಿಷತ್ ನಲ್ಲಿ ನಿನ್ನೆ ನಡೆದ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಇಂತಹ ಘಟನೆ ನಡೆಯಬಾರದಿತ್ತು ಎಂದರು.​ ಈ ಹಿಂದೆ ಡಿ.ಎಚ್.ಶಂಕರಮೂರ್ತಿ ಸಭಾಪತಿಗಳಾಗಿದ್ದ ವೇಳೆ ಕಾಂಗ್ರೆಸ್ ನವರು ಅವಿಶ್ವಾಸ ತಂದು ಮತಕ್ಕೆ ಹಾಕಿದ್ದರು. ಈಗಲೂ ಅಂತಹದಕ್ಕೆ ಅವಕಾಶ ನೀಡಬಹುದಿತ್ತು. ಆದರೆ ಕಾಂಗ್ರೆಸ್ ನವರು ನಡೆದುಕೊಂಡ ರೀತಿ ಸರಿ ಇರಲಿಲ್ಲ ಎಂದು ಹೇಳಿದರು.

 
 
 
 
 
 
 
 
 

Leave a Reply