ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಖುರ್ಚಿಗಾಗಿ ಫೈಟ್ ಆರಂಭ!

ಮೈಸೂರು- ಚುನಾವಣೆ ಬರುವ ಮೊದಲೆ ವಿಧಾನಸೌಧದ ಮೂರನೆ ಮಹಡಿಯ ಸಿಎಂ ಖರ್ಚಿ ಮೇಲೆ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಟವಲ್ ಹಾಕಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡೆದಿರಲು ನಾನು ಸನ್ಯಾಸಿಯಲ್ಲ, ಕಾವಿ ಬಟ್ಟೆ ತೊಟ್ಟಿಲ್ಲ ಎಂದು ಮುಖ್ಯಮಂತ್ರಿ ಆಗುವ ಅಭಿಲಾಷೆಯನ್ನು ಡಿ.ಕೆ.ಶಿವಕುಮಾರ್ ಬಹಿರಂಗವಾಗಿಯೇ ಹೇಳಿದ್ದಾರೆ.

ಈ ಮೂಲಕ ಮತ್ತೊಮ್ಮ ನಾನೇ ಸಿಎಂ ಆಗುತ್ತೇನೆ ಎಂದೇಳುವ ಟಗರುಗೆ ಬಂಡೆ ಡಿಚ್ಚಿ ಹೊಡೆದಿದೆ. ಸಿದ್ದರಾಮೋತ್ಸವದ ಮೂಲಕ ಹೈಲೈಟ್ ಆಗಲು ರಾಜಕೀಯ ತಂತ್ರಗಾರಿಕೆ ರೂಪಿಸಿರುವ ಟಗರುಗೆ ಇದು ವ್ಯಕ್ತಿ ಪೂಜೆಯಲ್ಲ ಎಂಬ ಭಿನ್ನದನಿಯ ಸಂದೇಶವನ್ನು ಬಂಡೆ ರವಾನಿಸಿದೆ.

ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಸಿದ್ರು ಎಂಬ ಮಾತಿನಂತೆ ಇನ್ನು ಚುನಾವಣೆ ಹತ್ತಿರ ಬಂದಿಲ್ಲ, ಆಗಲೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಸಿಎಂ ಖುರ್ಚಿಗಾಗಿ ಫೈಟ್ ಆರಂಭವಾಗಿದೆ. ಮೈಸೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಮುಂದಿನ ಮುಖ್ಯಮಂತ್ರಿ ಆಗುವ ಆಸೆಯನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸ್ಥಾನಕ್ಕೆ ಆಸೆ ಪಡೆದಿರುವುದಕ್ಕೆ ನಾನೇನು ರಾಜಕೀಯ ಸನ್ಯಾಸಿಯೆ, ಕಾವಿ ಬಟ್ಟೆ ಹಾಕಿಕೊಂಡಿದ್ದೇನೆ ಎಂದು ಪ್ರಶ್ನಿಸಿದರು. ಈ ಮೂಲಕ ಸಿಎಂ ರೇಸ್ ನಲ್ಲಿ ನಾನು ಮುಂಚೂಣಿಯಲ್ಲಿದ್ದೇನೆ ಎಂದು ಬಂಡೆ ಟಗರುಗೆ ಡಿಚ್ಚಿ ಹೊಡೆದಿದೆ.

ಒಕ್ಕಲಿಗ ಸಮುದಾಯದ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಸಿಎಂ ಆದರು. ಅದೇ ರೀತಿ ಒಕ್ಕಲಿಗರಿಗೂ ಸಿಎಂ ಸ್ಥಾನ ಒಲಿಯಲಿದೆ. ಒಕ್ಕಲಿಗರು ನನ್ನ ಬೆನ್ನಿಗೆ ನಿಂತರೆ ಇದೆಲ್ಲಾ ಸಾಧ್ಯ ಎಂದು ಹೇಳಿದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಒಕ್ಕಲಿಗ ಸಮುದಾಯದ ದಾಳ ಉರುಳಿಸಿದರು.

ಸಿದ್ದರಾಮೋತ್ಸವ ವ್ಯಕ್ತಿ ಪೂಜೆಯಲ್ಲ. ಅದೊಂದು ಹುಟ್ಟಹಬ್ಬದ ಕಾರ್ಯಕ್ರಮವಷ್ಟೆ ಎಂದು ಟಾಂಗ್ ಕೊಟ್ಟ ಡಿಕೆಶಿ, ಸಿದ್ದರಾಮೋತ್ಸವದ ಮೂಲಕ ತಾನು ಹೈಲೈಟ್ ಆಗಬೇಕೆಂಬ ಸಿದ್ದರಾಮಯ್ಯಗೆ ಚಾಟಿ ಬೀಸಿದರು.

ಸಮ್ಮಿಶ್ರ ಸರ್ಕಾರ ಉರುಳಿಸಿ ಆಪರೇಷನ್ ಕಮಲದಲ್ಲಿ ಬಿಜೆಪಿಗೆ ಹೋಗಿರುವ ಶಾಸಕರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ತಿಳಿಸಿದರು. ರಾಜಕೀಯ ಅಂದರೆ ಸಾಧ್ಯತೆಗಳ ಕಲೆ. ಆದರೆ ಈ ಪೋಲಿಟಿಕಲ್ ಸ್ಟ್ಯಾಟರ್ಜಿಯ ಸಿಕ್ರೇಟ್ ನ್ನು ಈಗಲೆ ಹೇಳುವುದಿಲ್ಲ ಎಂದು ತಿಳಿಸಿದರು.

ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಎಲ್ಲಾ ಹಗರಣಗಳ ಬಗ್ಗೆ ಸಮಗ್ರ ತನಿಖೆ ಮಾಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಕೇಸರಿ ಪಾಳೆಯಕ್ಕೆ ಚಳಿ ಹುಟ್ಟಿಸಿದರು.

 
 
 
 
 
 
 
 
 
 
 

Leave a Reply