ರಾಜ್ಯ ಸಚಿವ ಖಾತೆ ಹಂಚಿಕೆ ಫೈನಲ್ ~ ಯುವಕರಿಗೆ ಜಾಕ್ ಪಾಟ್

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಹಣಕಾಸು ಖಾತೆ ಸೇರಿದಂತೆ ಪ್ರಮುಖ ಖಾತೆಯನ್ನು ತಾವು ಇಟ್ಟುಕೊಂಡಿದ್ದಾರೆ.

ಗ್ರಹ ಖಾತೆಯನ್ನು ಅರಗ ಜ್ಞಾನೇಂದ್ರ, ಗೋವಿಂದ ಕಾರಜೋಳ ಅವರಿಗೆ ಸಣ್ಣ ಮತ್ತು ಬೃಹತ್ ನೀರಾವರಿ, ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್, ಅಶೋಕ್ ಅವರಿಗೆ ಕಂದಾಯ, ಶ್ರೀರಾಮುಲು ಸಾರಿಗೆ ಖಾತೆ ನೀಡಲಾಗಿದೆ.

ಸೋಮಣ್ಣ ಅವರಿಗೆ ವಸತಿ ಮತ್ತು ಮೂಲಸೌಕರ್ಯ, ಉಮೇಶ್ ಕತ್ತಿ ಅವರಿಗೆ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು, ಎಸ್.ಅಂಗಾರಗೆ ಮೀನುಗಾರಿಕೆ, ಬಂದರು, ಮತ್ತು ಒಳನಾಡು ಜಲಸಾರಿಗೆ, ಜೆ.ಸಿ.ಮಾಧುಸ್ವಾಮಿಗೆ ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರ ಖಾತೆ ನೀಡಲಾಗಿದೆ.

ಡಾ.ಸಿ.ಎನ್.ಅಶ್ವತ್ಥನಾರಾಯಣ-ಉನ್ನತ ಶಿಕ್ಷಣ, ಐಟಿ-ಬಿಟಿ, ಅರಗ ಜ್ಞಾನೇಂದ್ರಗೆ ಗೃಹ, ಸಿಸಿ ಪಾಟೀಲ್-ಲೋಕೋಪಯೋಗಿ, ಆನಂದ್ ಸಿಂಗ್- ಪರಿಸರ ಮತ್ತು ಜೀವಶಾಸ್ತ್ರ, ಪ್ರವಾಸೋದ್ಯಮ, ಕೋಟ ಶ್ರೀನಿವಾಸ ಪೂಜಾರಿ-ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ, ಪ್ರಭು ಚೌಹಾಣ್-ಪಶುಸಂಗೋಪನೆ, ಮುರುಗೇಶ್ ನಿರಾಣಿ- ಸಣ್ಣ ಮತ್ತು ಬೃಹತ್ ಕೈಗಾರಿಕೆ, ಶಿವರಾಮ್ ಹೆಬ್ಬಾರ್- ಕಾರ್ಮಿಕ, 

ಹಾಲಪ್ಪ ಆಚಾರ್-ಗಣಿಗಾರಿಕೆ, ಶಂಕರ್ ಬಿ.ಪಾಟೀಲ್-ಜವಳಿ, ಸಕ್ಕರೆ, ಮುನಿರತ್ನ- ತೋಟಗಾರಿಕೆ, ಎಸ್.ಟಿ.ಸೋಮಶೇಖರ್-ಸಹಕಾರ, ಬಿ.ಸಿ.ಪಾಟೀಲ್- ಕೃಷಿ, ಬೈರತಿ ಬಸವರಾಜ-ನಗರಾಭಿವೃದ್ಧಿ, ಡಾ.ಕೆ.ಸುಧಾಕರ್-ಆರೋಗ್ಯ, ವೈದ್ಯಕೀಯ ಶಿಕ್ಷಣ, ಬಿ.ಗೋಪಾಲಯ್ಯ-ಅಬಕಾರಿ, ಶಶಿಕಲಾ ಜೊಲ್ಲೆ- ಮುಜರಾಯಿ, ಹಜ್, ವಕ್ಫ್ ಖಾತೆ

 

ಎಂಟಿಬಿ ನಾಗರಾಜ್-ಪೌರಾಡಳಿತ ಮತ್ತು ಸಣ್ಣ ಕೈಗಾರಿಕೆ, ಡಾ.ನಾರಾಯಣ ಗೌಡ- ಯುವಜನ ಮತ್ತು ಕ್ರೀಡೆ, ಬಿ.ಸಿ.ನಾಗೇಶ್- ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ, ವಿ.ಸುನೀಲ್ ಕುಮಾರ್-ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಂಚಿಕೆ ಮಾಡಲಾಗಿದೆ.

 
 
 
 
 
 
 
 
 
 
 

Leave a Reply