ನೂತನ ಸಚಿವ ಸಂಪುಟದಲ್ಲಿ ಉಡುಪಿಯ ಶಾಸಕ ಕೆ .ರಘುಪತಿ ಭಟ್ ರವರಿಗೆ ಸಚಿವ ಸ್ಥಾನ‌..?

ಸೋಲಿಲ್ಲದ ಸರದಾರ, ಸದಾ ಲವಲವಿಕೆಯಿಂದಿರುವ ಉಡುಪಿ ಶಾಸಕ ಕೆ.ರಘಪತಿ ಭಟ್ ರವರಿಗೆ ಈ ಬಾರಿಯ ಸಂಪುಟದಲ್ಲಿ  ಸಚಿವ ಸ್ಥಾನ ಒದಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿದೆ.

ತನ್ನಷ್ಟಕ್ಕೆ ತಾನು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಭಟ್ ರವರು ಹಡಿಲು ಯೋಜನೆಯಲ್ಲಿ ರಾಷ್ಟವ್ಯಾಪಿ ಸುದ್ದಿಯಲ್ಲಿದ್ದಾರೆ.

ಮೂರು ಭಾರಿ ಚುನಾವಣೆಯಲ್ಲಿ ಆರಿಸಿ ಬಂದವರು. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಭಟ್ , ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ರೀತಿ ಅವರಿಗೊಂದು ಪ್ಲಸ್ ಪಾಯಿಂಟ್.

 ಉಡುಪಿಯ ಅಷ್ಟಮಠದವರು ಯಾವುದೇ ರಾಜಕೀಯಕ್ಕೆ ತಲೆಹಾಕುವುದಿಲ್ಲವಾದರೂ ಅಷ್ಟಮಠಗಳ ನೆರಳಿನಲ್ಲೇ ಬೆಳೆದವರು. ಶ್ರೀ ಕೃಷ್ಣಮುಖ್ಯಪ್ರಾಣ, ಅಷ್ಟಮಠದ ಯತಿಗಳ ಆಶೀರ್ವಾದ ಪಡೆದುಕೊಂಡೇ, ವ್ಯಾವಹಾರಿಕವಾಗಿ ಮತ್ತು ರಾಜಕೀಯದಲ್ಲಿ ಮೇಲೆ ಬಂದವರು ರಘುಪತಿ ಭಟ್.

ಈ ಭಾರಿ ಭಟ್ಟರಿಗೊಂದು ಸಚಿವ ಸ್ಥಾನ  ಸಿಗಲೇ ಬೇಕೆಂಬ ಬಲವಾದ ಒತ್ತಡ ಕಾರ್ಯಕರ್ತರದ್ದು. ರಾಜಕೀಯ ತಂತ್ರಗಾರಿಕೆಯಲ್ಲಿ ಕೂಡ ಮುಂದಿರುವ ರಘುಪತಿಗೆ ಮರ್ಯಾದಾ ಪುರುಷೋತ್ತಮ ರಾಘವ ಕೈ ಬಿಡಲಿಕ್ಕಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸಚಿವ ಸ್ಥಾನಕ್ಕೆ ಯಾವುದೇ ಲಾಬಿ ಮಾಡುವುದಿಲ್ಲ. ಸಚಿವ ಸ್ಥಾನ ಒಲಿದು ಬಂದರೆ ನಿಭಾಯಿಸುವ ಧೈರ್ಯ ನನಗಿದೆ. ~  ಕೆ .ರಘುಪತಿ ಭಟ್
 
 
 
 
 
 
 
 
 

Leave a Reply