ತನ್ನಷ್ಟಕ್ಕೆ ತಾನು ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ಭಟ್ ರವರು ಹಡಿಲು ಯೋಜನೆಯಲ್ಲಿ ರಾಷ್ಟವ್ಯಾಪಿ ಸುದ್ದಿಯಲ್ಲಿದ್ದಾರೆ.
ಮೂರು ಭಾರಿ ಚುನಾವಣೆಯಲ್ಲಿ ಆರಿಸಿ ಬಂದವರು. ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಭಟ್ , ಹಿಂದೂ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ರೀತಿ ಅವರಿಗೊಂದು ಪ್ಲಸ್ ಪಾಯಿಂಟ್.
ಉಡುಪಿಯ ಅಷ್ಟಮಠದವರು ಯಾವುದೇ ರಾಜಕೀಯಕ್ಕೆ ತಲೆಹಾಕುವುದಿಲ್ಲವಾದರೂ ಅಷ್ಟಮಠಗಳ ನೆರಳಿನಲ್ಲೇ ಬೆಳೆದವರು. ಶ್ರೀ ಕೃಷ್ಣಮುಖ್ಯಪ್ರಾಣ, ಅಷ್ಟಮಠದ ಯತಿಗಳ ಆಶೀರ್ವಾದ ಪಡೆದುಕೊಂಡೇ, ವ್ಯಾವಹಾರಿಕವಾಗಿ ಮತ್ತು ರಾಜಕೀಯದಲ್ಲಿ ಮೇಲೆ ಬಂದವರು ರಘುಪತಿ ಭಟ್.