ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡು ಮಾಡರ್ನ್ ಬಿಲ್ಡಿಂಗ್ ಮೊದಲ ಅಂತಸ್ತಿ ನಲ್ಲಿ ಗುರುವಾರ ಕಾಮತ್ ಫೋಟೊಪ್ರೊ ನೂತನ ಶೋರೂಮ್ ಜೋತಿಷ್ಯ ವಿದ್ವಾನ್ ಕಬಿಯಾಡಿ ಜಯರಾಮ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿ, ಛಾಯಾಗ್ರಹಣ ವ್ಯವ ಹಾರದಲ್ಲಿ ಆದುನಿಕ ತಂತ್ರ ಜ್ಞಾನದ ವಸ್ತುಗಳ ಬಳಕೆಯಿಂದ ಈ ಕ್ಷೇತ್ರ ದಲ್ಲಿ ವಿಶೇಷ ಸ್ಪರ್ಧೆ ಹಾಗು ಗುಣಮಟ್ಟ ನೀಡಲು ಸಾಧ್ಯ, ಉತ್ತಮ ವ್ಯವಹಾರದಿಂದ ಈ ಸಂಸ್ಥೆ ಕೀರ್ತಿ ಗಳಿಸಲಿ ಎಂದು ಶುಭ ಹಾರೈಸಿ ದರು.
ಮುಖ್ಯ ಅತಿಥಿ ಗಳಾಗಿ ಎಸ್ ಕೆಪಿಎ ಉಡುಪಿ ಹಾಗು ದಕ ಜಿಲ್ಲಾ ಅಧ್ಯಕ್ಷ ಶ್ರೀಧರ ಶೆಟ್ಟಿಗಾರ್ ವೃತ್ತಿ ಬಾಂದವರು ಛಾಯಾಗ್ರಹಣದಲ್ಲಿ ಡಿಜಿಟಲ್ ಬಳಕೆಯಿಂದ ಹೆಸರು ಹಾಗು ಹಣ ಗಳಿಸಲು ಪೂರಕವಾಗಿದೆ ಎಂದರು.
ಉಡುಪಿ ವಲಯ ಅಧ್ಯಕ್ಷ ಪ್ರಕಾಶ್ ಸೇರಿಗಾರ್, ರಾಘವೇಂದ್ರ ಕೊಡಂಗಳ, ಕಟ್ಟಡ ಮಾಲೀಕ ಶ್ರೀ ಲಕ್ಷ್ಮೀ ನಾಯಕ್, ತೃಪ್ತಿ ಕಾಮತ್, ಸಂಸ್ಥೆಯ ಮಾಲಕ ನಂದು ಕಾಮತ್ ಸ್ವಾಗತಿಸಿದರು, ಗಿರೀಶ ಕಿಣಿ ವಂದಿಸಿದರು ಜ್ಯೋತಿ ಶಾನುಬೋಗ್ ನಿರೂಪಿಸಿದರು.