ಪೂರ್ಣಪ್ರಜ್ಞ ವಿದ್ಯಾಪೀಠ ಮಂತ್ರಾಲಯ ಶ್ರೀಗಳಿಗೆ ಅಭಿವಂದನೆ

ಬೆಂಗಳೂರು: ಶ್ರೀ ಮಂತ್ರಾಲಯ ಗುರುರಾಘವೇಂದ್ರ ಮಠದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರ 50 ನೇ ಜನ್ಮವರ್ಧಂತಿ ವರ್ಷದ ಅಂಗವಾಗಿ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಪೇಜಾವರ ಮಠದ ವತಿಯಿಂದ ಅಭಿವಂದನ ಸಮಾರಂಭ ಸೋಮವಾರ ಸಂಜೆ ನಡೆಯಿತು .

ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ದಿವ್ಯಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು . ಶ್ರೀ ಸುಬುಧೇಂದ್ರತೀರ್ಥರು ಮಂತ್ರಾಲಯ ಕ್ಷೇತ್ರವನ್ನು ಅತ್ಯಂತ ಭಕ್ತ ಸ್ನೇಹಿಯನ್ನಾಗಿ ಮಾಡಲು ಅನೇಕ ಯೋಜನೆಗಳನ್ನು ಅತ್ಯಂತ ಯಶಸ್ವಿಯಾಗಿ ಸಾಕಾರಗೊಳಿಸುತ್ತಿರುವುದನ್ನು ಶ್ಲಾಘಿಸಿದರು .
ವಿದ್ವಾನ್ ರಾಮವಿಠಲಾಚಾರ್ಯರು ಅಭಿವಂದನ ಭಾಷಷಣಗೈದರು . ವಿದ್ಯಾಪೀಠದ ವಿದ್ವಾಂಸರು ಪ್ರಾಧ್ಯಾಪಕ ವೃಂದ , ವಿದ್ಯಾರ್ಥಿಗಳು ನೂರಾರು ಭಕ್ತರು ಭಾಗವಹಿಸಿದ್ದರು .

 
 
 
 
 
 
 
 
 
 
 

Leave a Reply