ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ಚಾಮೀಜಿಯವರು ಈ ನೆಲ ಕಂಡ ಮಹಾನ್ ಗುರುಗಳಲ್ಲಿ ಒಬ್ಬರು . ಇವತ್ತು ಉಡುಪಿ ಶ್ರೀ ಕೃಷ್ಣನ ದರ್ಶನ ಮತ್ತು ಅವರು ಮುನ್ನಡೆಸಿದ ಶ್ರೀಪೇಜಾವರ ಮಠಕ್ಕೆ ಭೇಟಿ ನೀಡಿ ಧನ್ಯತೆ ಅನುಭವಿಸಿದ್ದೇನೆ ಎಂದು ಉಡುಪಿ ಜಿಲ್ಲೆಗೆ ನೂತನ ಉಸ್ತುವಾರಿ ಕಾರ್ಯದರ್ಶಿಯಾಗಿ ನಿಯುಕ್ತರಾಗಿರುವ ಐಎಎಸ್ ಅಧಿಕಾರಿ ಕ್ಯಾ ಮಣಿವೆಣ್ಣನ್ ಬಣ್ಣಿಸಿದ್ದಾರೆ.
ಗುರುವಾರ ಉಡುಪಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶ್ರೀಕೃಷ್ಣ ಮಠ ಮತ್ತು ಪೇಜಾವರ ಮಠಕ್ಕೆ ಭೇಟಿ ನೀಡಿ ಶ್ರೀ ವಿಶ್ವೇಶತೀರ್ಥರ ಭಾವಚಿತ್ರಕ್ಕೆ ಮಾಲಾರ್ಪಣೆಗೈದ ಅವರು ಸ್ವಾಮೀಜಿಯವರು ವಿಧಿವಶರಾದ ದಿನ ತನಗೆ ತೀವ್ರ ದುಃಖವಾಗಿತ್ತು ಎಂದು ತಿಳಿಸಿ ಆ ದಿನ ಟ್ವೀಟರ್ ಮೂಲಕ ಹಂಚಿಕೊಂಡ ಸಂತಾಪ ಸಂದೇಶವನ್ನು ಮಠದ ಅಧಿಕಾರಿಗಳಿಗೆ ತೋರಿಸಿದರು .
ಪೇಜಾವರ ಮಠದ ಸಿ ಇ ಒ ಸುಬ್ರಹ್ಮಣ್ಯ ಭಟ್ ಮಣಿವೆಣ್ಣನ್ ಅವರನ್ನು ಬರಮಾಡಿಕೊಂಡರು . ಮೀನುಗಾರಿಕಾ ಇಲಾಖೆ ಉಡುಪಿ ಉಪ ನಿರ್ದೇಶಕ ಶಿವಕುಮಾರ್ ಜಿ ಎಮ್ ಉಪಸ್ಥಿತರಿದ್ದರು .