ಆರೋಗ್ಯಕ್ಕಾಗಿ ಸೈಕ್ಲಿಂಗ್ “ಜಾಥಾ ವಿಶೇಷ ಕಾಯ೯ಕ್ರಮ

ಮಣಿಪಾಲ: – ನಮ್ಮ ಶರೀರದ ಮತ್ತು ಮನಸ್ಸಿನ ಸ್ವಾಸ್ಯ ಉತ್ತಮವಾಗಿದ್ದರೆ ಮಾತ್ರ ಸದ್ರಡ ಜೀವನ ಸಾಗಿಸಲು ಸಾಧ್ಯ ಈ ನಿಟ್ಟಿನಲ್ಲಿ ಸೈಕ್ಲಿಂಗ್ ನಂತಹ ಚಿಟುವಟಿಕೆಗಳು ಪೂರಕವಾಗಿದೆ ಎಂದು ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು ಆಶೀವ೯ಚನ ನೀಡಿದರು.

ಅವರು ಫೆ.27 ರಂದು ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಕೆನರಾ ಬ್ಯಾಂಕ್ ವೃತ್ತ ಕಚೇರಿ ಮತ್ತು ವಸಂತಿ ಎ ಪೈ ಪ್ರತಿಷ್ಟಾನ ಮಣಿಪಾಲ ಇದರ ಆಶ್ರಯದಲ್ಲಿ ನಡೆದ “ಆರೋಗ್ಯಕ್ಕಾಗಿ ಸೈಕ್ಲಿಂಗ್ “ಜಾಥಾವನ್ನು ಸ್ವತಃ ಸೈಕಲ್ ಸವಾರಿ ಮತ್ತು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿದರು.

ಮಣಿಪಾಲದಿಂದ ಮಲ್ಪೆ ಸೀ ವಾಕ್ ವರೆಗೆ ನಡೆದ ಈ ಜಾಥಾದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಮಲ್ಪೆ ಬೀಚ್ ನಲ್ಲಿ ಆರೋಗ್ಯ ಮತ್ತು ಫಿಟ್ ಇಂಡಿಯಾ ಕುರಿತು ಕ್ವಿಚ್ ನಡೆಯಿತು. ಶ್ರೀ ಪಾದರ ಸೈಕಲ್ ಸವಾರಿ ಎಲ್ಲರನ್ನು ಬೆರಗುಗೊಳಿಸಿತು. ಈ ಸಂದಭ೯ದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾII ನಾಗಭೂಷಣ್ ಉಡುಪ, ಕೆನರಾ ಬ್ಯಾಂಕ್ ಡಿಜಿಎಂ ಪದ್ಮಾವತಿ, ವೈದ್ಯಕೀಯ ಪ್ರಕೋಷ್ಟ ಸಂಚಾಲಕ ಡಾII ರಾಮಚಂದ್ರ ಕಾಮತ್, ಸಹ ಸಂಚಾಲಕ ಡಾ|| ವಿದ್ಯಾಧರ ಶೆಟ್ಟಿ, ರಾಜ್ಯ ಕಾ.ಸದಸ್ಯ ಡಾ|| ವಿಜಯಿಂದ್ರ ವಸಂತ್, ಸೆಲ್ಕೋ ಸೋಲಾರ್ ಡಿಜಿಎಂ ಜಗದೀಶ್ ಪೈ, ಡಾII ರವೀಂದ್ರ ಕುಂದಾಪುರ, ವಿಶಾಲ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.
ಮೇ.ರಾಧಾಕೃಷ್ಣ ಕಾಯ೯ಕ್ರಮ ನಿರೂಪಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ವಂದಿಸಿದರು.
ಭಾಗವಹಿಸಿದವರಿಗೆ ಟಿ, ಶಟ್೯ ಮತ್ತು ಪ್ರಮಾಣ ಪತ್ರ ನೀಡಲಾಯಿತು.

 
 
 
 
 
 
 
 
 
 
 

Leave a Reply