ಜಡೀ ಬೂಟಿ ದಿನಾಚರಣೆ ಕಾರ್ಯಕ್ರಮ

ಪತಂಜಲಿಯ ಆಯುರ್ವೇದ ಸಂತ ಶಿರೋಮಣಿ ಆಚಾರ್ಯ ಬಾಲಕೃಷ್ಣ ಜೀ ಯವರ ಜನ್ಮದಿನಾಚರಣೆ ಪ್ರಯುಕ್ತ ಜಡೀ ಬೂಟಿ ದಿನಾಚರಣೆ ಕಾರ್ಯಕ್ರಮ ಪತಂಜಲಿ ಯೋಗ ಸಮಿತಿ ಉಡುಪಿ,ಪತಂಜಲಿ ಕಿಸಾನ್ ಭಾರತ್ ನ ನೇತೃತ್ವದಲ್ಲಿ ಪುನಾರು ಶ್ರೀ ಶಾಸ್ತವು ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ದಿನಾಂಕ 4-8-2022 ನೇ ಗುರುವಾರ ಆಚರಿಸಲಾಯಿತು. ಉಡುಪಿ ಪತಂಜಲಿ ಚಿಕಿತ್ಸಾಲಯದ ಯೋಗ ಸಾಧಕ ಸುರೇಶ್ ಭಕ್ತರು ಗಿಡಮೂಲಿಕೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು,ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕ್ರಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ರವರು ಸಭಿಕರಿಗೆ ಗಿಡಮೂಲಿಕೆ ಗಿಡಗಳನ್ನು ವಿತರಿಸಿ, ಬೆಳೆಸುವ ವಿಧಾನವನ್ನು ಸಹಾ ತಿಳಿಸಿದರು.ಪತಂಜಲಿ ಕಿಸಾನ್ ಭಾರತ್ ಜಿಲ್ಲಾ ಪ್ರಭಾರಿಗಳಾದ ಆನಂತರಾಯ ಶೆಣೆೈ ಹಾಗೂ ಹಿರಿಯ ಕೃಷಿಕರಾದ ಸಂಜೀವ ಪ್ರಭು ಪುನಾರು ಇವರನ್ನು ಸನ್ಮಾನಿಸಲಾಯಿತು. ಪತಂಜಲಿ ಯೋಗ ಸಮಿತಿ ಪ್ರಭಾರಿಗಳಾದ ವೆಂಕಟೇಶ್ ಮೆಹೆಂದಳೆ,ಕೆ.ರಾಘವೇಂದ್ರ ಭಟ್ ,ಲೀಲಾ ಅಮೀನ್,ರಂಜಿತ್ ಕೆ.ಎಸ್., ಶ್ರೀಪತಿ ಭಟ್,ವಿಶ್ವನಾಥ್ ಭಟ್,ಲಕ್ಷ್ಮೀ ಸುವರ್ಣ,ಯೋಗ ಶಿಕ್ಷಕರಾದ ಶ್ರೀಪತಿ ಕಾಮತ್, ಶಶಿಧರ ನಾಯಕ್,ರಮೇಶ್ ಸಾಲಿಯಾನ್ , ಹರೀಶ್ ಮೂಲ್ಯ,ಪ್ರೇಮ ನಾಯಕ್,ದೇವಳದ ಅರ್ಚಕರಾದ ಅಶೋಕ ಉಡುಪ,
ಮುರಳೀಧರ ಉಡುಪ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply