ಪತಂಜಲಿ ಯೋಗ ಸಮಿತಿ ಉಡುಪಿಯವರ ವತಿಯಿಂದ ಗುರು ವಂದನ ಕಾರ್ಯಕ್ರಮ

ಪತಂಜಲಿ ಯೋಗ ಸಮಿತಿ ಉಡುಪಿಯವರ ವತಿಯಿಂದ ಗುರು ವಂದನ ಹಾಗೂ ಅಭಿನಂದನಾ ಪತ್ರ ವಿತರಣೆ ಜು.10 ರಂದು ಮಥುರಾ ಕಂಫರ್ಟ್ ನಲ್ಲಿ ನಡೆಯಿತು.ಪೂರ್ಣ ಪ್ರಜ್ಞಾ ಕಾಲೇಜು ಉಡುಪಿಯ ನಿವ್ರತ ಪ್ರಾಂಶುಪಾಲರಾದ ಕೆ.ಸದಾಶಿವ ರಾವ್ ರವರು ಗುರು ಪೂರ್ಣಿಮಾ ಮಹತ್ವದ ಬಗ್ಗೆ ಉಪನ್ಯಾಸ ವನಿತ್ತು ಗೌರವಾರ್ಪಣೆ ಸ್ವೀಕರಿಸಿದರು. ಜಿಲ್ಲಾ ಸಂರಕ್ಷರಾದ ರಾಘವೇಂದ್ರ ಆಚಾರ್ಯ, ಗೌರವಾಧ್ಯಕ್ಷರಾದ ಕೆ.ಶಿವರಾಮ ಶೆಟ್ಟಿ ಹಾಗೂ ಕವಿತಾ ಕೃಷ್ಣಮೂರ್ತಿಯವರು ಯೋಗ ಸಾಧಕರಿಗೆ ಅಭಿನಂದನಾ ಪತ್ರ ವಿತರಣೆ ಮಾಡಿದರು. ಜಿಲ್ಲಾ ಸಮಿತಿಯ ಕೆ.ರಾಘವೇಂದ್ರ ಭಟ್, ವೆಂಕಟೇಶ ಮೆಹೆಂದಳೆ, ಲೀಲಾ ಅಮೀನ್, ಜಗದೀಶ್, ಶ್ರೀಪತಿ ಭಟ್ ಹಾಗೂ ನಾಗರಾಜ್ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply