ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಆದಿಉಡುಪಿ*
ಗರೋಡಿಗಳ ಅಧ್ಯಯನ ಮತ್ತು ಸಂಶೋಧನಾತ್ಮಕ ಗ್ರಂಥಗಳ ರಚನೆಗಾಗಿ ಪಾಂಗಳ ಪರಿಸರದ ಗರೋಡಿಗಳ ಮಾಹಿತಿ ಸಂಗ್ರಹಕ್ಕೆ ದಿನಾಂಕ 28.5.2022 ರಂದು ಬೆಳಿಗ್ಗೆ 10 ಗಂಟೆ ಗೆ ಸರಿಯಾಗಿ ಚಾಲನೆಯನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಶೇಖರ ಜಿ ಅಮೀನ್ ಆಡಳಿತ ಮೊಕ್ತೇಸರರು ಪಾಂಗಳ ಗುಡ್ಡೆ ಗರೋಡಿ, ಸದಾನಂದ ಪೂಜಾರಿ ನಂದಾ ಗೋಲ್ಡ್ ಉಡುಪಿ, ಜಯ ಡಿ. ಅಮೀನ್ ಪಾಂಗಳ ಗುಡ್ಡೆ ಗರೋಡಿ, ಸುಧಾಕರ್ ಡಿ. ಅಮೀನ್ ಪಾಂಗಳ ಗುಡ್ಡೆ ಗರೋಡಿ, ಘನಶ್ಯಾಮ್ ಮಲ್ಪೆ, ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ದಾಮೋದರ್ ಕಲ್ಮಾಡಿಯವರು ವಹಿಸಿದ್ದರು ಉಪಾಧ್ಯಕ್ಷರಾದ ಶೇಖರ್ ಮಾಸ್ಟರ್ ಕಲ್ಮಾಡಿ, ವೇದಿಕೆ ಯಲ್ಲಿದ್ದರು ಸುಮಾರು 12 ಗರೋಡಿಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸ್ವಾಗತ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಮಾಡಿದರು.
ವಂದನಾರ್ಪಣೆಯನ್ನು ಉಪಾಧ್ಯಕ್ಷರಾದ ಶೇಖರ್ ಮಾಸ್ಟರ್ ರವರು ನಿರ್ವಹಿಸಿದರು ಸಂಸ್ಥೆಯ ವಿಶ್ವಸ್ಥ ರಾದ ಶೇಖರ್ ಪೂಜಾರಿ, ಚೆಲುವರಾಜ್ ಪೆರಂಪಳ್ಳಿ, ಗಂಗಾಧರ ಕಿದಿಯೂರು, ಮಹೇಶ ಏನ್, ಹರೀಶ್ ಎಂ ಕೆ, ಸೂರ್ಯೋದಯ್ ಪೆರಂಪಳ್ಳಿ ಉಪಸ್ಥಿತರಿದ್ದರು