ಪಡುಬಿದ್ರೆ : ಸಚಿವರನ್ನು ಸ್ವಾಗತಿಸುವ ವೇಳೆ ಸಾವಿರಾರು ಹಣ ಎಗರಿಸಿದ ಕಳ್ಳರು

ಪಡುಬಿದ್ರೆ : ಸಚಿವ ಸ್ಥಾನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿ ಜಿಲ್ಲೆಗೆ ಆಗಮಿಸಿದ ಸುನೀಲ್‌ಕುಮಾರ್ ರನ್ನು ಸ್ವಾಗತಿಸುವ ಸಂದರ್ಭ ಜನಜಂಗುಳಿಯ ಲಾಭ ಪಡೆದ ಕಳ್ಳರು ಹಲವರ ಜೇಬಿಗೆ ಕತ್ತರಿ ಹಾಕಿ ಹಣ ಎಗರಿಸಿದ್ದಾರೆ.

ನೂಕುನುಗ್ಗಲಿನ ಲಾಭ ಪಡೆದ ಜೇಬುಕಳ್ಳರು, ಗುತ್ತಿಗೆದಾರ ಬ್ರಹ್ಮಾವರದ ಜೀವನ್ ಶೆಟ್ಟಿ ಜೇಬಿನಿಂದ 50 ಸಾವಿರ ರೂ. ಹಾಗೂ ಕಾಪು ಬಿಜೆಪಿ ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್ ಜೇಬಿನಿಂದ 28 ಸಾವಿರ ರೂ. ನಗದು ಎಗರಿಸಿದ್ದಾರೆ.

ಈ ಹಿಂದೆ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಡಿ.ವಿ. ಸದಾನಂದ ಗೌಡರನ್ನು ಇಲ್ಲಿ ಸ್ವಾಗತಿಸುವ ವೇಳೆಯೂ ಕಳ್ಳತನ ನಡೆದಿತ್ತು. ಶಾಸಕ ಲಾಲಾಜಿ ಆರ್. ಮೆಂಡನ್ ಮೊದಲೇ ಈ ಬಗ್ಗೆ ಎಚ್ಚರಿಸಿದ್ದರೂ, ಅದನ್ನು ಮರೆತು ಸ್ವಾಗತಿಸುವ ಉತ್ಸಾಹದಲ್ಲಿ ಮತ್ತೆ ಹಣ ಕಳೆದುಕೊಳ್ಳುವಂತಾಗಿದೆ. ಘಟನೆಗೆ ಸಂಬಂಧಿಸಿ ಬೆಳ್ಮಣ್‌ನಲ್ಲಿ ಶಂಕಿತ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

 
 
 
 
 
 
 
 
 
 
 

Leave a Reply