SSLC ಪರೀಕ್ಷೆಯಲ್ಲಿ 621/625 ಅಂಕಗಳನ್ನು ಪಡೆದ ನಿಶ್ಮಿತ್ ರವರಿಗೆ ಸನ್ಮಾನ

2022 ನೇ ಮಾರ್ಚ್/ಎಪ್ರಿಲ್ ನಲ್ಲಿ ನಡೆದ SSLC ಪರೀಕ್ಷೆಯಲ್ಲಿ 621/625 ಅಂಕಗಳನ್ನು ಪಡೆದು, ಕಾರ್ಕಳ ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನ ಪಡೆದ ನಿಟ್ಟೆಯ ಡಾ| ಎನ್.ಎಸ್.ಎ.ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ *ನಿಶ್ಮಿತ್*ರವರನ್ನು ಕಾರ್ಕಳ ತಾಲೂಕು ಪಂಚಾಯತ್ ಹಾಗೂ ಕಾರ್ಕಳ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಜಂಟಿಯಾಗಿ ದಿನಾಂಕ 23-05-2022 ರಂದು ಇಂಧನ ಸಚಿವರಾದ ಮಾನ್ಯ ಶ್ರೀ ವಿ. ಸುನಿಲ್ ಕುಮಾರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಎಸ್.ಅಂಗಾರರವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

 
 
 
 
 
 
 
 
 
 
 

Leave a Reply