ಅಂತಿಮ ತೀರ್ಪು ನೀಡಿ ನಿವೃತ್ತಿ ಹೊಂದಿದ ನ್ಯಾ.ಎಸ್.ಕೆ.ಯಾದವ್

ನವದೆಹಲಿ:27 ವರ್ಷಗಳಲ್ಲಿ ಹಲವಾರು ತನಿಖೆಯ ನಂತರ ಇಂದು ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಪ್ರಕರಣದ ತೀರ್ಪು ಪ್ರಕಟವಾಗಿದೆ.ಈ ತೀರ್ಪು ನೀಡಿದ ಲಕ್ನೋ ಸಿಬಿಐ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಎಸ್.ಕೆ.ಯಾದವ್ ತಮ್ಮ ನಿವೃತ್ತಿ ದಿನದಂದೆ ಅಂತಿಮ ತೀರ್ಪು ಪ್ರಕಟಿಸಿದ್ದಾರೆ.

60 ವರ್ಷದ ಎಸ್.ಕೆ. ಯಾದವ್ 2019ರಲ್ಲೇ ಸೇವೆಯಿಂದ ನಿವೃತ್ತರಾಗಿದ್ದು ಆದರೆ ಅವರ ಸೇವಾ ಅವಧಿಯನ್ನು ಮುಂದುವರಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. 2005 ರಿಂದ ಈ ಪ್ರಕರಣದ ವಿಚಾರಣೆಯನ್ನು ಯಾದವ್ ಅವರೇ ನಡೆಸುತ್ತಿದ್ದ ಕಾರಣ ಇನ್ನೆರಡು ವರ್ಷಗಳಲ್ಲಿ ಈ ಪ್ರಕರಣದ ಅಂತಿಮ ತೀರ್ಪನ್ನು ನೀಡುವಂತೆ ಸುಪ್ರೀಂ ಯಾದವ್ ಅವರಿಗೆ ಅಂದು ಸೂಚನೆ ನೀಡಿತ್ತು. ಅಂತೆಯೇ ಇಂದು ಅಂತಿಮ ತೀರ್ಪು ಪ್ರಕಟಿಸಿ ನ್ಯಾಯಾಧೀಶ ಯಾದವ್ ಅವರು ತಮ್ಮ ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ.

 
 
 
 
 
 
 
 
 

Leave a Reply