ದೀದಿ ವಿರುದ್ಧ ತೊಡೆ ತಟ್ಟಿದ್ದ ಬಿಜೆಪಿಯ ಸುವೇಂದು ಅಧಿಕಾರಿ- ದಾಖಲಾಯ್ತು ಕಳ್ಳತನದ ಕೇಸ್

ಪಶ್ಚಿಮ ಬಂಗಾಳ: ಇಲ್ಲಿನ ಚುನಾವಣೆ ಏನೋ ಮುಗಿದಿದೆ, ಆದರೆ ಬಿಜೆಪಿ-ಟಿಎಂಸಿ ಮಧ್ಯೆ ನಡೆಯುತ್ತಿರುವ ಕಾಳಗ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ದೀದಿ ವಿರುದ್ಧ ನಂದಿಗ್ರಾಮದಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಕಳ್ಳತನದ ಕೇಸ್ ದಾಖಲಿಸಲಾಗಿದೆ.

ಕಾಂತಿ ಪುರಸಭೆ ಕಚೇರಿಯಿಂದ ಪರಿಹಾರ ಸಾಮಗ್ರಿಗಳನ್ನು ಕದ್ದ ಆರೋಪದ ಮೇಲೆ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಸೌಮೇಂದು ಅಧಿಕಾರಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕಾಂತಿ ಪುರಸಭೆ ಆಡಳಿತ ಮಂಡಳಿಯ ಸದಸ್ಯ ರತ್ನದಿಪ್ ಮನ್ನಾ ಅವರ ದೂರಿನ ಅನ್ವಯ ಅಧಿಕಾರಿ ಸಹೋದರರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೇ 29 ರಂದು ಕಾಂತಿ ಪುರಸಭೆಗೆ ಬಂದ ಸುವೇಂದು ಅಧಿಕಾರಿ ಮತ್ತು ಅವರ ಸಹೋದರ ಮತ್ತು ಮಾಜಿ ಮುನ್ಸಿಪಲ್ ಮುಖ್ಯಸ್ಥ ಸೌಮೇಂದು ಅಧಿಕಾರಿಯ ನಿರ್ದೇಶನದಂತೆ, ಸರ್ಕಾರದ ಲಕ್ಷಾಂತರ ಪರಿಹಾರ ಸಾಮಾಗ್ರಿಗಳನ್ನು ಕಳವು ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಕೇಂದ್ರ ಸಶಸ್ತ್ರ ಪಡೆಗಳನ್ನು ಬಳಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 
 
 
 
 
 
 
 
 
 
 

Leave a Reply