ನರೇಂದ್ರ ಮೋದಿ ಸರಕಾರ ಕೃಷಿ ಕ್ಷೇತ್ರದಲ್ಲಿ ತಂದಿರುವ ಕ್ರಾಂತಿಕಾರಿ ಬದಲಾವಣೆಗಳನ್ನು, 3 ಮಹತ್ವದ ಮಸೂದೆ ಗಳ ಕುರಿತು, ಅದರ ಸಾಧಕಗಳ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಇಂದು ಪತ್ರಿಕಾ ಗೋಷ್ಠಿಯ ಮೂಲಕ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ರೈತನನ್ನು ಸ್ವಾವಲಂಬಿ, ಸ್ವತಂತ್ರ ಗೊಳಿಸುವ ಹಾಗೂ ಆತ ಬೆಳೆದ ಬೆಳೆಗಳಿಗೆ ಸ್ಪರ್ಧಾತ್ಮಕ ದರ ದೊರಕಿಸಿಕೊಡುವಲ್ಲಿ ಈ ಮಸೂದೆಗಳು ಸಹಕಾರಿ ಯಾಗಿರುತ್ತದೆ ಹಾಗೂ ರೈತನನ್ನು ಆರ್ಥಿಕವಾಗಿ ಸಧೃಢ ವಾಗಿಸುವ ನಿಟ್ಟಿನಲ್ಲಿ ಈ ಮಸೂದೆಗಳನ್ನು ತರಲಾಗಿದೆ ಎಂದರು.
ಮತ್ತು, ರೈತನ ಬದುಕನ್ನು ಹಸನಾಗಿಸಲು, ಆತ ಬೆಳೆದ ಬೆಳೆಗೆ ಸರಿಯಾದ ಬೆಲೆ ದೊರಕಿಸಿಕೊಡಲು, ಆತನಿಗೆ ಕಾನೂನಿನ ಭದ್ರತೆಯನ್ನು ನೀಡಲು ಪ್ರಧಾನಿ ಶ್ರೀ ನರೇಂದ್ರ ಮೋದಿ ಸರಕಾರ ಕಟಿಬದ್ಧವಾಗಿದೆ ಎಂದರು.