ಅಯೋಧ್ಯೆ : ಉತ್ತರಪ್ರದೇಶದ ವಾರಣಾಸಿಯ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಪ್ರಧಾನಿ ಮೋದಿ ಶಿಲಾ ನ್ಯಾಸ ನೆರವೇರಿಸಿದರು. ಕೋಟಿ ಕೋಟಿ ಭಾರತೀಯರು ಕಾದು ಕುಳಿತಿರುವ ಮರ್ಯಾದಾ ಪುರುಷೋತ್ತಮನಾದ ಶ್ರೀರಾಮನ ಐತಿ ಹಾಸಿಕ ರಾಮ ಮಂದಿರ ನಿರ್ಮಾಣದ ಕನಸಿಗೆ ಅಡಿಗಲ್ಲು ಹಾಕಲಾಗಿದೆ. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕ್ಕೆ ಪ್ರಧಾನಿ ಮೋದಿ ಭೂಮಿ ಪೂಜೆ ಮಾಡಿ ಶಿಲಾನ್ಯಾಸ ಮಾಡಿದ್ದಾರೆ. ಈ ಮೂಲಕ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ವಿಮಾನದಲ್ಲಿ ವಾರಣಾಸಿಗೆ ಬಂದಿಳಿದ ಮೋದಿ, ಹೆಲಿಕಾಪ್ಟರ್ ನಲ್ಲಿ ಅಯೋಧ್ಯೆಗೆ ಬಂದು ಮೊದಲು ಹನುಮಾನ್ ಗಡಿಯಲ್ಲಿ ಪೂಜೆ ಸಲ್ಲಿಸಿ, ರಾಮನ ಭಂಟ ಹನುಮಾನನ ಆಶೀರ್ವಾದ ಪಡೆದು ಬಳಿಕ ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ.
ಉತ್ತರಪ್ರದೇಶದ ವಾರಣಾಸಿಯ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸನೆರವೇರಿಸಿದರು. ಭಾರತದ ಇತಿಹಾಸದ ಪುರಾತನ ವಾಸ್ತುಶಿಲ್ಪ ಶೈಲಿಗಳಲ್ಲಿ ಒಂದಾಗಿರೋ ಪ್ರಸಿದ್ಧ ನಾಗರ ಶೈಲಿಯಲ್ಲಿ ಹಿಂದೂಗಳ ಆರಾಧ್ಯದೈವ ಶ್ರೀರಾಮನ ಮಂದಿರ ತಲೆ ಎತ್ತಲಿದೆ.
ಅಯೋಧ್ಯೆಯ ಶ್ರೀ ರಾಮನ ದೇವಾಲಯದ ವೈಶಿಷ್ಯಗಳನ್ನು ನೋಡೋದಾದ್ರೆ, ದೇವಾಲಯಕ್ಕೆ ಐದು ಗುಮ್ಮಟಗಳು ಇರಲಿವೆ. ದೇವರ ಗರ್ಭಗುಡಿ. ಅದರ ಮೇಲೆ ಶಿಖರವಿರಲಿದೆ. ಭವ್ಯವಾದ ಶ್ರೀರಾಮ ಮಂದಿರಕ್ಕೆ ಬರುವ ಅಪಾರ ಸಂಖ್ಯೆಯ ಭಕ್ತರಿಗೆ ಬಂದು-ಹೋಗಲು ವಿಶಾಲವಾದ ಆವರಣ ಇರಲಿದೆ. ಮಂದಿರದ ಸುತ್ತಮುತ್ತ ನಾಲ್ಕು ಮಂದಿರಗಳನ್ನ ನಿರ್ಮಿಸಲು ಆಡಳಿತ ಮಂಡಳಿ ನಿರ್ಧರಿಸಿದೆ. ಶ್ರೀರಾಮನ ಮಂದಿರ 161 ಅಡಿ ಎತ್ತರ. 360 ಅಡಿ ಉದ್ದ ಮತ್ತು 265 ಅಡಿ ಅಗಲ ಇರಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಶ್ರೀರಾಮಂದಿರದ ಶಿಲಾನ್ಯಾಸ ಕಾರ್ಯಕ್ರಮ karavlixpress.com ನೇರ ಪ್ರಸಾರವನ್ನು ನಿರಂತರ ಮಾಡುತ್ತಿದೆ