ಕೇಂದ್ರ ಸರ್ಕಾರವು 2023ನೇ ಸಾಲಿನ ಪ್ರದ್ಮಶ್ರೀ , ಪದ್ಮ, ಪದ್ಮ ವಿಭೂಷಣ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಿದೆ. 74ನೇ ಗಣರಾಜ್ಯೋತ್ಸವದ ಅಂಗವಾಗಿ ಈ ಪ್ರಶಸ್ತಿ ಘೋಷಣೆಯಾಗಿದ್ದು ಕರ್ನಾಟಕದ ಒಟ್ಟೂ ಎಂಟು ಮಂದಿ ಸಾಧಕರಿಗೆ ಪದ್ಮ ಗೌರವ ಸಂದಿರೋದು ವಿಶೇಷವಾಗಿದೆ. ಮಾಜಿ ಸಿಎಂ ಎಸ್.ಎಂ ಕೃಷ್ಣರಿಗೆ ಪದ್ಮವಿಭೂಷಣ, ಸುಧಾಮೂರ್ತಿ ಹಾಗೂ ಎಸ್.ಎಲ್ ಭೈರಪ್ಪರಿಗೆ ಪದ್ಮ ಭೂಷಣ ಪ್ರಶಸ್ತಿಗಳು ಸಂದಿವೆ.
ರಾಜಕೀಯ ರಂಗದಲ್ಲಿ ತೋರಿದ ಸಾಧನೆಯನ್ನು ಗುರುತಿಸಿ ಮಾಜಿ ಸಿಎಂ ಹಾಗೂ ಮಾಜಿ ರಾಜ್ಯಪಾಲ ಎಸ್.ಎಂ ಕೃಷ್ಣರಿಗೆ ಈ ಗೌರವನ್ನು ನೀಡಲಾಗಿದೆ. ಇನ್ನೂ ಸಾಮಾಜಿಕ ಕಾರ್ಯಗಳಿಗಾಗಿ ಸುಧಾ ಮೂರ್ತಿಗೆ ಪದ್ಮ ಭೂಷಣ ಗೌರವ ಸಂದಿದೆ. ಇನ್ನು ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತೋರಿದ ಸಾಧನೆಗಾಗಿ ಎಸ್.ಎಲ್ ಭೈರಪ್ಪ ಪದ್ಮ ಭೂಷಣ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇನ್ನು ಕಲಾ ವಿಭಾದಲ್ಲಿ ತಮಟೆಯ ತಂದೆ ಎಂಬ ಖ್ಯಾತಿಯನ್ನು ಹೊಂದಿರುವ ನಾಡೋಜ ಪಿಂಡಿಪಾಪನಹಳ್ಳಿ ಮುನಿ ವೆಂಕಟಪ್ಪ ಹಾಗೂ ಐ ಶಾ ರಶೀದ್ ಅಹಮನ್ ಕ್ವಾದ್ರಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಖಾದರ್ ವಲ್ಲಿ ದೂದೇಕುಲ ಹಾಗೂ ಪುರಾತತ್ವ ಶಾಸ್ತ್ರ ವಿಭಾಗದಲ್ಲಿ ಸುಬ್ಬರಾಮನ್ಗೆ ಕೇಂದ್ರ ಸರ್ಕಾರವು ಪದ್ಮ ಗೌರವವನ್ನು ನೀಡಿದೆ.
ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ (ಮರಣೋತ್ತರ), ಬಾಲಕೃಷ್ಣ (ಮರಣೋತ್ತರ), ದಿಲೀಪ್ ಮಹಲನಾಬೀಸ್(ಮರಣೋತ್ತರ), ಶ್ರೀನಿವಾಸ್ ವರದನ್ ಪದ್ಮವಿಭೂಷಣ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪದ್ಮಭೂಷಣ ಪ್ರಶಸ್ತಿಯನ್ನು ಸುಧಾ ಮೂರ್ತಿ, ಎಸ್.ಎಲ್ ಭೈರಪ್ಪ ಜೊತೆಯಲ್ಲಿ ಕುಮಾರ ಮಂಗಲಂ ಬಿರ್ಲಾ, ಆಧ್ಯಾತ್ಮ ಕ್ಷೇತ್ರದಲ್ಲಿ ತೆಲಂಗಾಣದ ಸ್ವಾಮಿ ಚಿನ್ನ ಜೀಯರ್, ಕಮಲೇಶ್ಡಿ ಪಾಟೀಲ್, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಿಂದ ದೆಹಲಿಯ ಕಪಿಲ್ ಕಪೂರ್, ಸುಮನ್ ಕಲ್ಯಾಣ ಪುರ, ಕಲಾ ಕ್ಷೇತ್ರದಲ್ಲಿ ತಮಿಳುನಾಡಿನ ವಾಣಿ ಜಯರಾಂಗೆ ನೀಡಲಾಗಿದೆ.