ನೀತಿ ಆಯೋಗದ ಕಾರ್ಯದಳಕ್ಕೆ ಡಾ.ಅವನೀಂದ್ರನಾಥ್ ರಾವ್ ಆಯ್ಕೆ

ಕೇಂದ್ರ ಸರಕಾರದ ಮಂತ್ರಾಲಯಗಳ ವಿವಿಧ ಗ್ರಂಥಾಲಯಗಳ ಬಲವರ್ಧನೆಗಾಗಿ ನೀತಿ ಆಯೋಗ ಕಾರ್ಯದಳವನ್ನು ರಚಿಸಿದೆ. ಇದರ ಸದಸ್ಯರಾಗಿ ಕನ್ನಡಿಗ ಡಾ.ಅವನೀಂದ್ರನಾಥ್ ರಾವ್ ರನ್ನು ನೇಮಕ ಮಾಡಲಾಗಿದೆ.

ಡಾ.ರಾವ್ ದೆಹಲಿಯ ಕೇಂದ್ರ ಸಚಿವಾಲಯ ಗ್ರಂಥಾಲಯದ ಗ್ರಂಥಾಲಯ ಮತ್ತು ಮಾಹಿತಿ ಅಧಿಕಾರಿಯಾಗಿ ಪದೋನ್ನತಿ ಪಡೆದಿದ್ದರು. ಆವರು ಈ ಹಿಂದೆ ಸಚಿವಾಲಯ ಗ್ರಂಥಾಲಯಗಳ ಕುರಿತು ಸಂಶೋಧನೆಯನ್ನೂ ನಡೆಸಿದ್ದರು.

 
 
 
 
 
 
 
 
 
 
 

Leave a Reply