ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ದಶಕಗಳಿಂದ ದಟ್ಟಣೆ, ಮೂಲಸೌಕರ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದ ಈ ಪುಣ್ಯಕ್ಷೇತ್ರವೀಗ ಗತವೈಭವಕ್ಕೆ ಮರಳಿದೆ. ಗಂಗಾನದಿ ತಟದಿಂದಲೇ ದೇಗುಲಕ್ಕೆ ನೇರ ಸಂಪರ್ಕ ಕಲ್ಪಿಸುವ ಕಾಶಿ ಕಾರಿಡಾರ್ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉದ್ಘಾಟಿಸಿದರು. ಆ ಮೂಲಕ ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದರು.
ಕಾಶಿಯ ವಿಶ್ವನಾಥ ದೇಗುಲದ ಆವರಣದಲ್ಲಿ ನಿರ್ವಿುಸಲಾಗಿರುವ ಅತ್ಯಾಧುನಿಕ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ಇದಕ್ಕೂ ಮುನ್ನ ವಿಶ್ವನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಮೋದಿ ಭಾಷಣದಲ್ಲಿ ಕನ್ನಡ ಹಾಗೂ ದ್ವೈತ ಮತದ ಸ್ಥಾಪಕ ಮಧ್ವಾಚಾರ್ಯರನ್ನು ಸ್ಮರಿಸಿದರು. ‘ಕಾಶಿಯ ವಿಶ್ವನಾಥ ಪಾಪದ ನಿವಾರಣೆ ಮಾಡುತ್ತಾನೆ ಎಂದು ಮಧ್ವಾಚಾರ್ಯರು ಶಿಷ್ಯರಿಗೆ ತಿಳಿಸಿದ್ದರು’ ಎಂದರು.
ಕಾಶಿಯ ವಿಶ್ವನಾಥ ದೇಗುಲವನ್ನು 1669ರ ಸೆ.2ರಂದು ಔರಂಗಜೇಬನ ಆದೇಶದ ಮೇರೆಗೆ ಕೆಡವಲಾಯಿತು. ಹಿಂದು ರಾಣಿ ಅಹಲ್ಯಾಬಾಯಿ ಹೋಳ್ಕರ್ 1776-78ರಲ್ಲಿ ಮರು ನಿರ್ಮಾಣ ಮಾಡಿದರು. ಆಗಿನ ದಿನದಲ್ಲೇ ಕಾಶಿ ಹಲವು ಅಭಿವೃದ್ಧಿ ಕಾಮಗಾರಿ ಗಳನ್ನು ಕಂಡಿತ್ತು. ಇದೀಗ ಹೊಸ ರೂಪ ಪಡೆದಿದೆ.
ಮೋದಿ ಮಿಂಚಿನ ಓಟ: ಬೆಳಗ್ಗೆ ವಾರಾಣಸಿಗೆ ಆಗಮನ, ಪ್ರಧಾನಿ ಕಾರಿನ ಮೇಲೆ ಹೂವಿನ ದಳಗಳ ಮಳೆ ಸುರಿಸಿದ ಸ್ಥಳೀಯರು ಗಂಗಾನದಿಗೆ ತೆರಳಿ ಪವಿತ್ರ ಸ್ನಾನ. ವಿಶ್ವನಾಥ ಮಂದಿರಕ್ಕೆ ಭೇಟಿ, ಪೂಜಾ ಕಾರ್ಯಕ್ರಮಗಳಲ್ಲಿ ಭಾಗಿ. ಪೌರ ಕಾರ್ವಿುಕರಿಗೆ ಪುಷ್ಪವೃಷ್ಟಿ ಮಾಡಿ ಗೌರವ, ಜತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮ, ಕಾರಿಡಾರ್ ಕಾರ್ವಿುಕರ ಜತೆ ಸಹಭೋಜನ.