ಕೇಸರಿ ಖುಷ್ಬೂ ಸುಂದರ್​​

ಚೆನ್ನೈ: ನೆನ್ನೆಯಷ್ಟೆ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ ನಟಿ ಖುಷ್ಬೂ ಸುಂದರ್​​ , ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿವಂತರು ಬೇಡ,​ ​ಅಲ್ಲಿ ಸತ್ಯವನ್ನು  ಹೇಳುವ ಹಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚೆನ್ನೈನಲ್ಲಿ ಮಾತನಾಡಿದ ಖುಷ್ಬೂ, ಕಾಂಗ್ರೆಸ್​ ಒಂದು ಬುದ್ಧಿ ಮಾಂದ್ಯರ ಪಕ್ಷ , ನಾನು ಬುದ್ಧಿಗೇಡಿಗಳ ಪಕ್ಷದಿಂದ ಹೊರ ಬಂದಿದ್ದೇನೆ ಅಂತಾ ಹೇಳಿದ್ದಾರೆ.​ ​ಇನ್ನು ದ್ರಾವಿಡ ಚಳುವಳಿ ಪಿತಾಮಹ ಪೆರಿಯಾರ್​ ಇವಿ ರಾಮಸ್ವಾಮಿ ಮಹಿಳಾ ದೌರ್ಜನ್ಯ ವಿರೋಧಿಸಿದ್ದವರು. ನಾನು ಅವರ ಅನುಯಾಯಿ, ಆದರೆ ಕಾಂಗ್ರೆಸ್​ ಪಕ್ಷ ಸತ್ಯವನ್ನು ಮಾತನಾಡುವ ಹಕ್ಕನ್ನು ನೀಡಲಿಲ್ಲ ಎಂದು ಆರೋಪಿಸಿದ್ದಾರೆ.

ತಮಿಳುನಾಡಿನಲ್ಲಿ ಕಾಂಗ್ರೆಸ್ಸಿನ ಬಲಿಷ್ಠರಾಗಿದ್ದ ಖುಷ್ಭೂ  ಪಕ್ಷವನ್ನು ತೊರೆದ ಕಾರಣ ತಿಳಿಸಿದ್ದಾರೆ.​ ​ಕಾಂಗ್ರೆಸಿನ ಹಲವು ನಾಯಕರು ಇತರರನ್ನು ತುಳಿಯುತ್ತಿದ್ದು ಹಾಗೂ ​ಸರ್ವಾಧಿಕಾರಿಗಳ ವರ್ತನೆ ​ತೋರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.​ ​ನಾನು ಕಾಂಗ್ರೆಸ್ ಗಾಗಿ ನಿಷ್ಠಳಾಗಿದ್ದೆ. ಆದರೆ, ಕಾಂಗ್ರೆಸ್​ ನನಗೆ ಸರಿಯಾಗಿ ಗೌರವಿಸಲಿಲ್ಲ ಎಂದಿದ್ದಾರೆ.

 
 
 
 
 
 
 
 
 
 
 

Leave a Reply